Friday, 4 August 2017

ನಮ್ಮ ಅಪ್ಪಾಜಿ ಕ್ಯಾಂಟೀನ್ ವಿಶೇಷ ಏನು..?

ಬೆಂಗಳೂರು (ಆ.02): ಸಿಲಿಕಾನ್ ಸಿಟಿಯಲ್ಲಿ ಈಗ ಕ್ಯಾಂಟಿನ್'ಗಳದ್ದೆ ಸದ್ದು. ಇಂದಿರಾ ಕ್ಯಾಂಟಿನ್ ಸದ್ದು ಗದ್ದಲದ ನಡುವೆಯೇ ಇಂದು ಅಪ್ಪಾಜಿ ಕ್ಯಾಂಟಿನ್ ಲೋಕಾರ್ಪಣೆಗೊಂಡಿದೆ. ಕಡಿಮೆ ದರದಲ್ಲಿ ಬಡವರ ಹೊಟ್ಟೆ ತುಂಬಿಸೋಕೆ ಬಂದಿರುವ ನಮ್ಮ ಅಪ್ಪಾಜಿ ಕ್ಯಾಂಟೀನ್'ಗೆ ಇಂದು ಚಾಲನೆ ಸಿಕ್ಕಿದೆ. ಈ ಕ್ಯಾಂಟೀನ್ ವಿಶೇಷತೆಗಳೇನು? ಇಲ್ಲಿದೆ ನೋಡಿ

ರಾಜಧಾನಿಗರ ಹಸಿವು ನಿಗಿಸುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಊಟ-ತಿಂಡಿ ನೀಡುವ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸುವ ಮುನ್ನವೇ 'ನಮ್ಮ ಅಪ್ಪಾಜಿ ಕ್ಯಾಂಟೀನ್' ಆರಂಭಗೊಂಡಿದೆ. ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ನೇತೃತ್ವದಲ್ಲಿ 'ನಮ್ಮ ಅಪ್ಪಾಜಿ ಕ್ಯಾಂಟೀನ್' ಹನುಮಂತನಗರದಲ್ಲಿ ತಲೆ  ಎತ್ತಿದ್ದು, ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಚಾಲನೆ ನೀಡಿದರು.  ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಚನ್ನಮ್ಮ ದೇವೇಗೌಡರು, ಶಾಸಕ ಗೊಪಾಲಯ್ಯ, ಹೊರಟ್ಟಿ ಸೆರಿದಂತೆ ಹಲವರು ಭಾಗಿಯಾಗಿದರು.

ನಮ್ಮ ಅಪ್ಪಾಜಿ ಕ್ಯಾಂಟೀನ್ ವಿಶೇಷ ಏನು..?

ಅಪ್ಪಾಜಿ ಕ್ಯಾಂಟೀನ್‌ನಲ್ಲಿ 5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್‌, ಕೇಸರಿಬಾತ್‌, ಸಿಗುತ್ತೆ.

10 ರೂ.ಗೆ ಪೊಂಗಲ್‌, ಮುದ್ದೆ ಬಸ್ಸಾರು, ಅನ್ನ ಸಾಂಬಾರ್,ರೈಸ್‌ ಬಾತ್‌,

3 ರೂ.ಗೆ ಕಾಫಿ-ಟೀ ನೀಡಲಾಗುವುದು.

ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ತನಕ ಕ್ಯಾಂಟೀನ್ ಓಪನ್ ಇರಲಿದೆ. ಇದೇ ಕ್ಯಾಂಟೀನ್ ನಲ್ಲಿ ಅಡುಗೆ ತಯಾರಿ ಆಗಲಿದೆ.

ನರೇಂದ್ರ ಮೋದಿ ಅವರ ಚಾಯ್ ಪೇ ಚರ್ಚಾ ಮಾದರಿಯಲ್ಲಿ ಮುದ್ದೆ ಜತೆಗೆ ಚರ್ಚೆ ಕಾರ್ಯಕ್ರಮ ಕೂಡಾ ಈ ಕ್ಯಾಂಟೀನ್ ಮೂಲಕ ಜೆಡಿಎಸ್ ಏರ್ಪಡಿಸುವ ಸಾಧ್ಯತೆಗಳಿವೆ.

10 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್ ನಿರ್ಮಾಣ ಆಗಿದ್ದು,ಆರಂಭದಲ್ಲಿ ಸಾವಿರ ಮಂದಿಗೆ ತಿಂಡಿ,ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಮೊದಲ ದಿನವಾದ ಇಂದು ಅಪ್ಪಾಜಿ ಕ್ಯಾಂಟಿನ್ ಮುಂದೆ ಜನಸಾಗರವೇ ಹರಿದು ಬಂದಿತ್ತು. ಇಂದು ಉಚಿತ ಊಟ ನೀಡಿದ್ದು ಸಾರ್ವಜನಿಕರು ತಿಂದು ಖುಷಿಯಾದರು.  ಅಲ್ಲದೆ ಇಷ್ಟು ಕಡಿಮೆಗೆ ಎಲ್ಲೂ ಊಟ ಸಿಗುತ್ತಿಲ್ಲ.  ಹೀಗಾಗಿ ಬಡವರಿಗೆ ಇದೊಂದು ಒಳ್ಳೆಯ ಕೆಲಸ ಮಾಡಿದ್ದಾರೆ ಅಂತಾ ಸಾರ್ವಜನಿಕರ ಖುಷಿಪಟ್ಟರು.

ಸದ್ಯ ಹನುಮಂತನಗರದಲ್ಲಿ ಅಪ್ಪಾಜಿ ಕ್ಯಾಂಟಿನ್ ತೆರೆಯಲಾಗಿದೆ. ಒಂದು ವೇಳೆ ಈ ಕ್ಯಾಂಟೀನ್ ಯಶಸ್ವಿಯಾದರೆ  ನಗರದ 27 ವಿಧಾನಸಭಾ ಕ್ಷೇತ್ರದಲ್ಲೂ ವಿಸ್ತರಿಸಲು ಟಿ.ಎ.ಶರವಣ ನಿರ್ಧರಿಸಿದ್ದಾರೆ. ಬಡ ಜನರಿಗಾಗಿ ತೆರೆದಿರುವ ಕ್ಯಾಂಟಿನ್ ಹೀಗೆ ಮುಂದುವರೆಯಲಿ ಅನ್ನೋದು ಸಾರ್ವಜನಿಕರ ಅಭಿಪ್ರಾಯ.

ಮುಗಿಯುತ್ತಿಲ್ಲ ಐಟಿ ತಪಾಸಣೆ, ದೆಹಲಿ ನಿವಾಸದಲ್ಲಿ ಸಿಕ್ತು ಕಂತೆ ಕಂತೆ ಹಣ, ಮೂರನೇ ದಿನ


ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿರುವ ತೆರಿಗೆ ಇಲಾಖೆ ಅಧಿಕಾರಿಗಳು ಮೂರನೇ ದಿನವು ಶೋಧ ಕಾರ್ಯ ಮುಂದುವರಿಸಿದ್ದಾರೆ. ಅದರೊಂದಿಗೆ ಡಿ.ಕೆ ಶಿವಕುಮಾರ್ ಅವರ ಜಾಲ ಜಾಲಾಟ ಸದ್ಯಕ್ಕೆ ನಿಲ್ಲುವ ಸೂಚನೆಗಳು ಸಿಗುತ್ತಿಲ್ಲ.

ತೆರಿಗೆ ಇಲಾಖೆ ಅದಿಕಾರಿಗಳು ಈ ಮಟ್ಟದಲ್ಲಿ ತಪಾಸಣೆ ನಡೆಸುತ್ತಿರೋದು ನೋಡಿದರೆ, ಮುಂದೆ ಡಿಕೆ ಶಿವಕುಮಾರ್ ಅವರ ಮೇಲೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಸಹ ಪ್ರವೇಶಿಸುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಕಾನೂನಿನ ಪ್ರಕಾರ ₹ 30 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆಯಾದರೆ ಆ ಪ್ರಕರಣ ಸಹಜವಾಗಿಯೇ ಡಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಬರುತ್ತದೆ. ಈಗಾಗಲೇ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಕೋಟ್ಯಂತರ ಹಣ ಸಿಕ್ಕಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಯಾವುದೇ ಸಮಯದಲ್ಲಿ ಬೇಕಾದರೂ ಈ ಪ್ರಕರಣವನ್ನು ತನ್ನ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಇನ್ನು ಇಂದು ನಡೆದ ಪ್ರಮುಖ ಬೆಳವಣಿಗೆಗಳತ್ತ ಒಮ್ಮೆ ನೋಡುವುದಾದರೆ, ಅವು ಹೀಗಿವೆ…

ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಮಾಧ್ಯಮಗಳ ಬಳಿ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರ ತಾಯಿ ಗೌರಮ್ಮ, ಇದರ ಹಿಂದೆ ಕೇವಲ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ನಾಯಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವೂ ಇದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಮುಖ್ಯಮಂತ್ರಿಗಳ ಬಳಿ ಕೇಳಿದಾಗ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್, ‘ನಮ್ಮ ತಾಯಿ ಮೋದಿ ಅವರ ಹೆಸರು ಹೇಳಲು ಹೋಗಿ ಸಿದ್ದರಾಮಯ್ಯನವರ ಹೆಸರು ಹೇಳಿದ್ದಾರೆ. ಐಟಿ ಅಧಿಕಾರಿಗಳು ತಮ್ಮ ತಾಯಿಗೆ ಹೆಚ್ಚು ಗೊಂದಲ ಮಾಡಿಸಿದ್ದಾರೆ. ಆ ಗೊಂದಲದಲ್ಲಿ ಬಾಯಿ ತಪ್ಪಿ ನಮ್ಮ ತಾಯಿ ಸಿದ್ದರಾಮಯ್ಯನವರ ಹೆಸರು ಹೇಳಿದ್ದಾರೆ’ ಎಂದು ಹೇಳಿದರು.ಇಂದು ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ತೆರಳಿದ ಡಿ.ಕೆ ಸುರೇಶ್ ಅವರನ್ನು ಆರಂಭದಲ್ಲಿ ಮನೆಯ ಒಳಗೆ ಬಿಡದೇ ಗೇಟ್ ಬಳಿಯೆ ಕೆಲ ಕಾಲ ನಿಲ್ಲಸಲಾಯಿತು. ನಂತರ ಅವರನ್ನು ಮನೆಯೊಳಗೆ ಬಿಡಲಾಯಿತು. ಆದರೆ ಕೋಣೆಯೊಳಗೆ ಡಿ.ಕೆ ಶಿವಕುಮಾರ್ ಅವರ ವಿಚಾರಣೆ ನಡೆಸಿ ಸುರೇಶ್ ಅವರು ಶಿವಕುಮಾರ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ.ಇಂದು ಬೆಳಗ್ಗೆ ಡಿ.ಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವ ಬಗ್ಗೆಯೂ ವರದಿಗಳು ಬಂದಿತ್ತಾದರೂ ನಂತರ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಯಿತು. ಈ ಬಗ್ಗೆ ಸುರೇಶ್ ಅವರು ಸಹ ಶಿವಕುಮಾರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಯಾವುದೇ ತೊಂದರೆ ಇಲ್ಲ ಎಂದರು.ಮೂರನೇ ದಿನವು ಡಿ.ಕೆ ಶಿವಕುಮಾರ್ ಅವರ ಸದಾಶಿವನಗರದ ಮನೆ, ಮೈಸೂರಿನಲ್ಲಿರುವ ಅವರ ಮಾವ ತಿಮ್ಮಯ್ಯ ಅವರ ಮನೆಯಲ್ಲಿ ತಪಾಸಣೆ ಮುಂದುವರಿಸಿದ ಐಟಿ ಅಧಿಕಾರಿಗಳು ಅವರ ಬಳಿ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದರು. ಈ ವಿಚಾರಣೆ ವೇಳೆ ಮೈಸೂರಿನ ವಿವಿಧ ಬ್ಯಾಂಕುಗಳಲ್ಲಿರುವ ಲಾಕರ್ ಗಳ ಬಗ್ಗೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ತಿಮ್ಮಯ್ಯನವರು ಸತಾಯಿಸಿದರೂ ಅಂತಿಮವಾಗಿ ಆ ಬಗ್ಗೆ ಮಾಹಿತಿ ನೀಡಿದರು. ಆ ಲಾಕರ್ ಪರಿಶೀಲನೆ ನಡೆಸಿದ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ತಿಮ್ಮಯ್ಯ ಅವರಿಗೆ ಸಂಬಂಧಿಸಿದ್ದ ಎಲ್ಲಾ ವ್ಯವಹಾರಗಳನ್ನು ಸದ್ಯಕ್ಕೆ ನಿಲ್ಲುಸುವಂತೆ ಸೂಚನೆ ನೀಡಲಾಗಿದೆ.ಮಧ್ಯಾಹ್ನದ ವೇಳೆ ಐಟಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಅವರ ಮತ್ತೊಬ್ಬ ಆಪ್ತ ಶರ್ಮಾ ಟ್ರಾವೆಲ್ಸ್ ಮಾಲೀಕ ಸುನೀಲ್ ಕುಮಾರ್ ಶರ್ಮಾ ಅವರ ಮನೆ ಮೇಲೂ ದಾಳಿ ಮಾಡಿದರು. ಈ ದಾಳಿ ವೇಳೆ ಸುನೀಲ್ ಅವರು ವಿವಿಧ ಬ್ಯಾಂಕುಗಳಲ್ಲಿ 16 ಲಾಕರ್ ಹೊಂದಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಇವುಗಳನ್ನು ಕೂಲಂಕುಶವಾಗಿ 8 ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಈ ಲಾಕರ್ ಗಳ ಜತೆಗೆ ಮನೆಯಲ್ಲಿರುವ ನೆಲ ಮಾಳಿಗೆಯಲ್ಲೂ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಡಿ.ಕೆ ಶಿವಕುಮಾರ್ ಅವರ ಮತ್ತೊಬ್ಬ ಆಪ್ತ ವಿನಯ್ ಕಾರ್ತಿಕ್ ಅವರನ್ನು ಗೌಪ್ಯ ಸ್ಥಳದಲ್ಲಿಟ್ಟಿರುವ ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಲೇ ಇದ್ದಾರೆ.ಇಂದು ಡಿ.ಕೆ ಶಿವಕುಮಾರ್ ಅವರ ಮನೆಯಲ್ಲಿ ನಡೆಯುತ್ತಿರುವ ವಿಚಾರಣೆಯ ಕುರಿತಂತೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಐಟಿ ಅಧಿಕಾರಿಗಳು ಮೊಬೈಲ್ ಜಾಮರ್ ಗಳನ್ನು ಅಳವಡಿಸಿದ್ದಾರೆ.ಡಿ.ಕೆ ಶಿವಕುಮಾರ್ ಅವರ ದೆಹಲಿಯ ಸಬ್ದರ್ ಜಂಗ್ ನಲ್ಲಿರುವ ನಿವಾಸದಲ್ಲಿ ₹ 100, 500 ಹಾಗೂ 2000 ಮುಖಬೆಲೆಯ ನೋಟುಗಳ ಕಂತೆಗಳ ರಾಶಿ ಸಿಕ್ಕಿದ್ದು, ಇವುಗಳ ಮೊತ್ತ ₹ 8 ಕೋಟಿಗೂ ಹೆಚ್ಚಾಗಿದೆ ಎಂದು ಮಾಹಿತಿ ಬಂದಿವೆ.

Thursday, 3 August 2017

ಪಾಲಿಕೆ ಬೊಕ್ಕಸಕ್ಕೆ ಸುಮಾರು 200 ಕೋಟಿ ರೂ. ನಷ್ಟ

ಬೆಂಗಳೂರು, ಆ.3- ಕಸ ವಿಲೇವಾರಿ ಅವ್ಯವಹಾರದಲ್ಲಿ ಮೇಯರ್ ಜಿ.ಪದ್ಮಾವತಿ ಅವರು ಶಾಮೀಲಾಗಿದ್ದು, ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸುಮಾರು 200 ಕೋಟಿ ರೂ. ನಷ್ಟ ಸಂಭವಿಸುತ್ತದೆ. ಈ ನಷ್ಟಾನ ಕಾಂಗ್ರೆಸ್‍ನೋರು ಭರಿಸ್ತಾರಾ ಎಂದು ಪ್ರಶ್ನಸಿರುವ ಪ್ರತಿ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಇಡೀ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಕಸವಿಲೇವಾರಿ ಗುತ್ತಿಗೆಗೆ ಟೆಂಡರ್ ಕರೆಯದೆ ಸರ್ವೀಸ್ ಪ್ರೊವೈಡರ್ ಮೂಲಕ ಕಸ ವಿಲೇವಾರಿ ಮಾಡಿಸುತ್ತಿರುವುದರಿಂದ ಸರ್ಕಾರಕ್ಕೆ ಶೇ.15ರಷ್ಟು ಸರ್ವೀಸ್ ಟ್ಯಾಕ್ಸ್ ಕಟ್ಟಬೇಕು. ಇದು ಮೇಯರ್ ಪದ್ಮಾವತಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಬೇಜವಾಬ್ದಾರಿತನದ ಪರಮಾವಧಿ. ಇದÀರಿಂದ ಸರ್ಕಾರಕ್ಕೆ ಸರ್ವೀಸ್‍ಚಾರ್ಜ್ ಮೂಲಕ 200 ಕೋಟಿಗೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಈ ಹಣ ತೆರಿಗೆದಾರರ ದುಡ್ಡು. ಹಾಗಾಗಿ ಮೇಯರ್ ನಗರದ ನಾಗರಿಕರಿಗೆ ಉತ್ತರ ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ರೆಡ್ಡಿ ಆಗ್ರಹಿಸಿದರು.

ನಾನು ಕಳೆದ ಹಲವಾರು ಸಭೆಗಳಲ್ಲಿ ಕಸವಿಲೇವಾರಿ ಗುತ್ತಿಗೆ ಕರೆಯಬೇಕೆಂದು ಒತ್ತಾಯ ಮಾಡಿದ್ದೆ. ಆದರೆ, ಆಡಳಿತ ನಡೆಸುತ್ತಿರುವವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸರ್ವೀಸ್ ಪ್ರೊವೈಡರ್ ಮೂಲಕ ಕಸ ವಿಲೇವಾರಿ ಮಾಡಿಸುತ್ತಿರುವುದರಿಂದ 200 ಕೋಟಿ ರೂ. ಹೊರೆ ಬಿದ್ದಿದೆ. ಇವರು ಬೆಂಗಳೂರು ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಕಸ ವಿಲೇವಾರಿ ಘಟಕಗಳನ್ನು ಮುಚ್ಚಿಸಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಕೇವಲ ಹಣ ಲಪಟಾಯಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ದೂರಿದರು. ಸ್ಟೀಲ್‍ಬ್ರಿಡ್ಜ್ ನಿಲ್ಲಿಸಿದ್ದರಿಂದ ಕಮಿಷನ್‍ನಿಂತಿಹೋಗಿದೆ ಎಂದುಕೊಂಡು ಕಸದಲ್ಲಿ ಹಣ ಮಾಡಲು ಹರಟಿದ್ದಾರೆ. ಹೀಗಾಗಿ ಮೇಯರ್ ಪದ್ಮಾವತಿ ಹಾಗೂ ಜಾರ್ಜ್ ಅವರು ನಾಗರದ ನಾಗರಿಕರಿಗೆ ಸಮಜಾಯಿಷಿ ನೀಡಬೇಕೆಂದು ಒತ್ತಾಯಿಸಿದರು.

ವಾಲಿಬಾಲ್‍ನಲ್ಲೂ ಅವ್ಯವಹಾರ:

ಮೇಯರ್‍ಕಪ್‍ವಾಲಿಬಾಲ್ ಕ್ರೀಡೆ ಆಯೋಜಿಸಬೇಕಾದರೆ ಕಾನೂನು ಬದ್ಧವಾಗಿ ಉಪಸಮಿತಿ ರಚಿಸಬೇಕು. ಆ ಸಮಿತಿಗಳು ಸಭೆ ನಡೆಸಿ ಯಾವ್ಯಾವುದಕ್ಕೆ ಎಷ್ಟು ಹಣ ವೆಚ್ಚ ಮಾಡಬೇಕೆಂದು ನಿರ್ಧರಿಸಬೇಕು. ಆದರೆ, ಮೇಯರ್ ಪದ್ಮಾವತಿಯವರು ಪಾಳೆಗಾರಿಕೆ ನೀತಿ ಅನುಸರಿಸಿ ಆಯುಕ್ತರ ಮೇಲೆ ಒತ್ತಡ ತಂದು ಒಂದು ಕೋಟಿ ರೂ. ಹಣ ಬಿಡುಗಡೆ ಮಾಡಿಸಿಕೊಂಡು ಅಷ್ಟೂ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಪದ್ಮನಾಭರೆಡ್ಡಿ ಮತ್ತೊಂದು ಗಂಭೀರ ಆರೋಪ ಮಾಡಿದರು.

ಶಾಸಕರು, ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಕಾಂಗ್ರೆಸ್ ಕಪ್ ವಾಲಿಬಾಲ್ ಪಂದ್ಯಾವಳಿಯನ್ನು ಇವೆಂಟ್‍ಮ್ಯಾನೆಜ್‍ಮೆಂಟ್ ಮೂಲಕ ನಡೆಸಿದ್ದಾರೆ. ಇದರ ಮಾಲೀಕರು ಯಾರು ? ಅವರಿಗೆ ಪಂದ್ಯಾವಳಿ ನಡೆಸಲು ಅನುಮತಿ ಕೊಟ್ಟವರು ಯಾರು ? ಇದೆಲ್ಲದರ ಬಗ್ಗೆ ಮೇಯರ್ ಅವರು ಉತ್ತರ ಕೊಡಬೇಕೆಂದು ಒತ್ತಾಯಿಸಿದರು. ಒಟ್ಟಾರೆ ಕಸ ವಿಲೇವಾರಿ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಈ ಎರಡು ಅವ್ಯವಹಾರಗಳ ಬಗ್ಗೆ ಸೂಕ್ತ ನ್ಯಾಯಾಂಗ ತನಿಖೆ ನಡೆಸಬೇಕೆಂದು ರೆಡ್ಡಿ ಆಗ್ರಹಿಸಿದರು.

ಐಟಿ ರೇಡ್‍ಗೂ ಬಿಜೆಪಿಗೂ ಸಂಬಂಧವಿಲ್ಲ:

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ ಐಟಿ ರೇಡ್‍ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಆದಾಯ ತೆರಿಗೆ ಅಧಿಕಾರಿಗಳು ಅವರಿಗೆ ಬಂದ ಮಾಹಿತಿ ಆಧರಿಸಿ ದಾಳಿ ಮಾಡಿದ್ದಾರೆ. ಇದರ ಬಗ್ಗೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ ನಿರಾಧಾರ ಎಂದು ಇದೇ ವೇಳೆ ಪದ್ಮನಾಭರೆಡ್ಡಿ ತಿಳಿಸಿದರು.

ಬೆಂಗಳೂರು ನಗರ ಬಿ.ಜೆ.ಪಿ.ಅಧ್ಯಕ್ಷರಾದ ಪಿ.ಎನ್.ಸದಾಶಿವರವರ ಹುಟ್ಟುಹಬ

🌻🌼🌸🌺🌻🌼🌸🌺🌹🌷
ಬೆಂಗಳೂರು ನಗರ ಬಿ.ಜೆ.ಪಿ.ಅಧ್ಯಕ್ಷರಾದ ಪಿ.ಎನ್.ಸದಾಶಿವರವರ ಹುಟ್ಟುಹಬ್ಬದ ಅಚರಣೆಯನ್ನು ಸುಂಕೇನಹಳ್ಳಿ ವಾರ್ಡನ ಬಸವನಗುಡಿ ಮುಖ್ಯರಸ್ತೆ ಎಸ್.ಬಿ.ಎನ್.ಹಾಲ್ ನಲ್ಲಿ ಅದ್ದೂರಿ ಅಚರಿಸಲಾಯಿತು.ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ,ಶಾಸಕರಾದ ಆರ್.ಅಶೋಕ ಮತ್ತು ಉದಯಗುರುಡಾಚಾರ್ ಮಾಜಿ ಮಹಾಪೌರರಾದ ಕಟ್ಟೆ ಸತ್ಯನಾರಾಯಣ ,ಮಾಜಿ ಉಪಮಹಾಪೌರರುಗಳಾದ ಎಸ್ .ಹರೀಶ್ ,ರಂಗಣ್ಣ ಬಿ.ಬಿ.ಎಂ.ಪಿ.ಸದಸ್ಯರುಗಳಾದ ಡಿ.ಎನ್.ರಮೇಶ್, ಉಮೇಶ್ ಶೆಟ್ಟಿ ,ಸವಿತಾ ಮಾಯಣ್ಣ ಗೌಡ ,ಪ್ರತಿಭಾ ಧನರಾಜ್ .ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎ.ಹೆಚ್.ಬಸವರಾಜ್ ,ಗೋಪಿ ,ಗಣೇಶ್ ಬಿ.ಜೆ.ಪಿ.ಮುಖಂಡರಾದ ಲಕ್ಷ್ಮೀಕಾಂತ್ ಪ್ರಕಾಶ್ ,ಶಿಲ್ಪಾ ಗಣೇಶ್ ,ಶಾರದ ಪೂರ್ಣ ನಾಯಕ್ ಹುಟ್ಟಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಿ.ಎನ್.ಸದಾಶಿವರವರಿಗೆ ಶುಭಾ ಕೋರಿದರು.
🌴🌴
ಇದೇ ಸಂದರ್ಭದಲ್ಲಿ ಮಾತನಾಡಿದ ಸುಂಕೇನಹಳ್ಳಿ ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಡಿ.ಎನ್.ರಮೇಶ್ ರವರು ಬೆಂಗಳೂರು ನಗರ ಬಿ.ಜೆ.ಪಿ.ಅಧ್ಯಕ್ಷರಾದ ಪಿ.ಎನ್.ಸದಾಶಿವರವರು ಸರಳ ,ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ .ಅವರ ಸಂಘಟನೆ ಸಾಮರ್ಥ್ಯವನ್ನು ನೋಡಿ ಬಿ.ಜೆ.ಪಿ.ಪಕ್ಷವು ಅವರನ್ನು ಗುರುತಿಸಿದೆ .ಅವರ ಮಾರ್ಗದರ್ಶನ ,ಸಲಹೆ ಮತ್ತು ಬೆಂಬಲದಿಂದ ಸುಂಕೇನಹಳ್ಳಿ ವಾರ್ಡ ಅಭಿವೃದ್ದಿ ಪಥದತ್ತ ಹೆಜ್ಜೆ ಹಾಕುತ್ತಿದೆ .ಪಿ.ಎನ್.ಸದಾಶಿವರವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಬಿ.ಬಿ.ಎಂ.ಪಿ.ಶಾಲೆ ಮತ್ತು ಸರ್ಕಾರಿ ಪಾಠಶಾಲೆಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಯಿತು ಮತ್ತು ಹಿರಿಯ ನಾಗರಿಕರ ಗುರುತಿನ ಪತ್ರ ಹಾಗೂ ಹಲವಾರು ಪಿಂಚಣಿ ಯೋಜನೆಯ ಫಲಾನುಭವಿಗಳಿಗೆ ಗುರುತಿನ ಪತ್ರ ವಿತರಿಸಲಾಯಿತು ಬೆಂಗಳೂರು ನಗರ ಬಿ.ಜೆ.ಪಿ.ಅಧ್ಯಕ್ಷರಾದ ಪಿ.ಎನ್.ಸದಾಶಿವರವರಿಗೆ ನಾಡಿನ ಸೇವೆ ಮಾಡಲು ಇನ್ನು ಹೆಚ್ಚು ಶಕ್ತಿ ನೀಡಲಿ ಎಂಬುದು ನಮ್ಮ ಶುಭಾಹಾರೈಕೆ ಎಂದು ಡಿ.ಎನ್.ರಮೇಶ್ ರವರು ಹೇಳಿದರು.
           

Wednesday, 2 August 2017

A great work from our karnataka police again

Abhinava srivastava..... From uttar Pradesh. Resided in yeswanthapura now. ...I highly qualified..software engineer.  Worked with ola cabs. 

He has developed ...adhar E kyc verification ...in authorised.

Software enginner arrested .

For developing.. addhaar unauthorised...

🏆 ಮೇಯರ್ ಕಪ್ 2017🏆

🏆 ಮೇಯರ್ ಕಪ್ 2017🏆
ಮೇಯರ್ ಕಪ್ ರಾಷ್ಟೀಯ ಮಟ್ಟದ ಹೊನಲು ಬೆಳಕಿನ ಪುರುಷ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾವಳಿಯನ್ನು
ರಾಜಾಜಿನಗರದ ಶ್ರೀರಾಮಮಂದಿರ ಆಟದ ಮೈದಾನದಲ್ಲಿ  ಉದ್ದಾಟನೆ ಸಮಾರಂಭ ಅದ್ದೂರಿಯಾಗಿ ನೇರವೇರಿತು .
ಸಮಾರಂಭದಲ್ಲಿ ಮಹಾಪೌರರಾದ ಶ್ರೀಮತಿ ಪದ್ಮಾವತಿಯವರು ,ನಗರಾಭಿವೃದ್ದಿ ಸಚಿವರಾದ ಕೆ.ಜೆ.ಜಾರ್ಜ್ ಮತ್ತುಅಯುಕ್ತರಾದ ಮಂಜುನಾಥ ಪ್ರಸಾದ್, ಆಡಳಿತ ಪಕ್ಷದ ನಾಯಕರಾದ ಮಹಮದ್ಮ ರಿಜ್ಞಾನ್ ನವಾಬ್ ಉಪಮಹಾಪೌರರಾದ ಆನಂದ್ ಜಾತ್ಯತೀತ ಜನತಾದಳದ ನಾಯಕಿಯಾದ ರಮೀಳಾ ಉಮಾಶಂಕರ್ ಮತ್ತು ಮಾಜಿ ಆಡಳಿತ ಪಕ್ಷದ ನಾಯಕರಾದ ಸತ್ಯನಾರಾಯಣ, ಬಿ.ಬಿ.ಎಂ.ಪಿ.ಸದಸ್ಯರುಗಳಾದ.      ಲಕ್ಷ್ಮೀನಾರಾಯಣ(ಗುಂಡಣ್ಣ) ಜಿ.ಕೃಷ್ಣಮೂರ್ತಿ ,ಹೆಚ್.ಮಂಜುನಾಥ ಶ್ರೀಮತಿ ಮಂಜುಳಾ ವಿಜಯಕುಮಾರ್ ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುನಿರಾಜು ಮತ್ತು ವಿಜಯಕುಮಾರ್ ,ನಾಮನಿರ್ದಶಿತ ಸದಸ್ಯರಾದ ಮೋಹನ್ ಕುಮಾರ್ ರವರು ಭಾಗವಹಿಸಿದ್ದರು.
⚽⚽⚽🥇🥈🥉
ಮುಗಿಲು ಮುಟ್ಟಿದ ಜನಸಾಗರ
ರೋಮಾಂಚಕಾರಿ ಪಂದ್ಯಗಳು.
ವಾಲಿಬಾಲ್ ಕ್ರೀಡಪಟುಗಳನ್ನು ನಾದ ವಾದ್ಯಗಳ ಮುಖಾಂತರ ಕ್ರೀಡಾಂಗಣಕ್ಕೆ ಕರೆ ತರಲಾಯಿತು .ನಂತರ ಕ್ರೀಡಾಪಟುಗಳ ಪಥ ಸಂಚಲನ ಆರಂಭವಾಯಿತು .ಸಿಡಿ ಮದ್ದಗಳ ಸಂಭ್ರಮ ಮಾಡಲಾಯಿತು .
              Dr. Srikaanth

Tuesday, 1 August 2017

🏆ಮೇಯರ್ ಕಪ್🏆

🏆ಮೇಯರ್ ಕಪ್🏆
ಮೇಯರ್ ಕಪ್ 2017ರ ಸಾಲಿನ ರಾಷ್ಟೀಯ ಮಟ್ಟದ ಹೊನಲು ಬೆಳಕಿನ ಪುರುಷ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾವಳಿಯನ್ನು
ಶ್ರೀ ರಾಮ ಮಂದಿರ ಆಟದ ಮೈದಾನದಲ್ಲಿ ನಾಳೆಯಿಂದ ಆರಂಭವಾಗಲಿದ್ದು .ಇದರ ಪ್ರಯುಕ್ತ ಇಂದು ಮಹಾಪೌರರಾದ ಶ್ರೀಮತಿ ಪದ್ಮಾವತಿಯವರು ಕ್ರೀಡಾಂಗಣದಲ್ಲಿ ನಡೆಸುತ್ತಿರುವ ಸಿದ್ದತೆಗಳನ್ನು ಪರಿಶೀಲನೆ ಮಾಡಿದರು .ಹಾಗೂ ಬಿ.ಬಿ.ಎಂ.ಪಿ.ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಿದರು.
ರಾಜಾಜಿನಗರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಮತ್ತು ಬಹುಮಾನದ ಮೊತ್ತ ಅತಿ ಹೆಚ್ಚು ನೀಡಲಾಗುತ್ತಿದೆ ,ಕ್ರೀಡಾಪಟುಗಳಿಗೆ ಉತ್ತಮ ವಸತಿ ಸೌಕರ್ಯ ನೀಡಲಾಗಿದೆ.
ಅಂತರಾಷ್ಟೀಯ ಹಾಗೂ ರಾಷ್ಟೀಯ ಮಟ್ಟದ ಪುರುಷ ಮತ್ತು ಮಹಿಳಾ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ದೊಮ್ಮಲೂರು ವಾರ್ಡನಲ್ಲಿ "ಆರ್ಯ ಭಟ್ಟ"ಸೇತುವೆ ಉದ್ಘಾಟನ


ದೊಮ್ಮಲೂರು ವಾರ್ಡನಲ್ಲಿ "ಆರ್ಯ ಭಟ್ಟ"ಸೇತುವೆ ಉದ್ಘಾಟನೆಯನ್ನು ಶಾಸಕರಾದ ಎನ್.ಎ.ಹ್ಯಾರೀಸ್ ಮತ್ತು ದೊಮ್ಮಲೂರು ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಲಕ್ಷ್ಮೀನಾರಾಯಣ(ಗುಂಡಣ್ಣ)ರವರು ಸೇತುವೆ ಉದ್ಘಾಟನೆ ಮಾಡಿದರು.
🚀🚀🚀🚀
ದೊಮ್ಮಲೂರು ವಾರ್ಡ ಖ್ಯಾತ ವಿಜ್ಞಾನಿ ಯು.ಆರ್.ರಾವ್ ರಸ್ತೆ ಯಲ್ಲಿರುವ ಆರ್ಯಭಟ್ಟ ಸೇತುವೆ ,ಈ ಮೊದಲು 10ಆಡಿ ರಸ್ತೆ ಇತ್ತು ವಾಹನ ಸಂಚಾರ ದುರ್ಗಮ ಪರಿಸ್ಥಿತಿ ಹಾಗೂ ನಾನ ಅಪಘಾತ ಸಂಭವಿಸಿತ್ತು  ಹಲಸೂರು ಕಡೆಗೆ ಹೋಗಬೇಕಾದರೆ ಇದು ಪ್ರಮುಖ ರಸ್ತೆಯಾಗಿತ್ತು .ಇದೀಗ 1ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿ ,30ಆಡಿಗಳ ರಸ್ತೆ ನಿರ್ಮಾಸಲಾಗಿದೆ .ಒಂದು ತಿಂಗಳ ಅವಧಿಯಲ್ಲಿ ಸೇತುವೆ ನಿರ್ಮಿಸಿ ,ಉದ್ಘಾಟನೆ ಮಾಡಿ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಸುಗಮವಾಗಿ ಸಾಗಲು ಆನುವು ಮಾಡಿಕೊಡಲಾಗಿದೆ .ಕೇಂಬ್ರಿಡ್ಜ್. ರಸ್ತೆ ಹಾಗೂ ದೊಮ್ಮಲೂರು ಲಿಂಕ್ ರಸ್ತೆಯಾಗಿರುವುದರಿಂದ ಇದೀಗ ವಾಹನ ಸವಾರರು ಹಲಸೂರು ಕಡೆ ಮಾರ್ಗ ಚಲಿಸಲು ಆರ್ಯಭಟ್ಟ ಸೇತುವೆ ಮುಖಾಂತರ ಹೋದರೆ 4ಕಿಲೋ ಮೀಟರ್ ದೂರ ಕ್ರಮಿಸುವುದು  ಉಳಿತಾಯವಾಗಲಿದೆ ಎಂದು ದೊಮ್ಮಲೂರು ಬಿ.ಬಿ.ಎಂ.ಪಿ.ಸದಸ್ಯರಾದ ಲಕ್ಷ್ಮೀನಾರಾಯಣ(ಗುಂಡಣ್ಣ)ರವರು ಆರ್ಯಭಟ್ಟ ಸೇತುವೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.