Tuesday 29 August 2017

GST Revenue Figures – July 2017  source from PIB



The Goods and Services Tax (GST) tax was introduced on 1st of July, 2017.  The last date for payment of GST for the month of July 2017 was 25th August, 2017.  The last date for filing returns in cases, where the taxpayer wanted to avail transitional credit was 28th August, 2017 and, in all other cases, it was 25th August, 2017. 

 

            If we exclude the taxpayers who have registered with the GSTN in August 2017 and the composition dealers, total number of tax payers who were required to file the returns for July 2017 is 59.57 lakhs, of which, as on 29th August, 2017 (10 a.m.), 38.38 lakh returns have been filed, which is 64.42% of the total number of returns, which are to be filed for the month of July 2017. 

 

            The total revenue of GST paid under different heads upto 29th August, 2017 (10 a.m) is Rs.92,283 crore.  The total CGST revenue is Rs.14,894 crore, SGST revenue is Rs.22,722 crore, IGST revenue is Rs.47,469 crore (of which IGST from imports is Rs.20,964 crore) and Cess is Rs.7,198 crore (of which Rs.599 crore is Compensation Cess from imports). 

 

            It may be mentioned that IGST will be allocated between the CGST and the SGST to the extent that the same is used for payment of CGST/SGST.  This exercise will be done based on the cross-utilisation report to be received from the GSTN.  Exact revenue figures of the Central and the State Governments respectively will be known after this exercise is complete before the end of this month.

 

            Out of total 72.33 lakh taxpayers, 58.53 lakh taxpayers have completely migrated to the GSTN and13.80 lakh taxpayers are yet to complete their procedural formalities to migrate to the GSTN.  The number of new taxpayers who have registered with the GSTN upto 29th August, 2017 (10 a.m.) is 18.83 lakhs. – July 2017 

The Goods and Services Tax (GST) tax was introduced on 1st of July, 2017.  The last date for payment of GST for the month of July 2017 was 25th August, 2017.  The last date for filing returns in cases, where the taxpayer wanted to avail transitional credit was 28th August, 2017 and, in all other cases, it was 25th August, 2017. 

 

            If we exclude the taxpayers who have registered with the GSTN in August 2017 and the composition dealers, total number of tax payers who were required to file the returns for July 2017 is 59.57 lakhs, of which, as on 29th August, 2017 (10 a.m.), 38.38 lakh returns have been filed, which is 64.42% of the total number of returns, which are to be filed for the month of July 2017. 

 

            The total revenue of GST paid under different heads upto 29th August, 2017 (10 a.m) is Rs.92,283 crore.  The total CGST revenue is Rs.14,894 crore, SGST revenue is Rs.22,722 crore, IGST revenue is Rs.47,469 crore (of which IGST from imports is Rs.20,964 crore) and Cess is Rs.7,198 crore (of which Rs.599 crore is Compensation Cess from imports). 

 

            It may be mentioned that IGST will be allocated between the CGST and the SGST to the extent that the same is used for payment of CGST/SGST.  This exercise will be done based on the cross-utilisation report to be received from the GSTN.  Exact revenue figures of the Central and the State Governments respectively will be known after this exercise is complete before the end of this month.

 

            Out of total 72.33 lakh taxpayers, 58.53 lakh taxpayers have completely migrated to the GSTN and13.80 lakh taxpayers are yet to complete their procedural formalities to migrate to the GSTN.  The number of new taxpayers who have registered with the GSTN upto 29th August, 2017 (10 a.m.) is 18.83 lakhs.

ಮಾಜಿ ಮುಖ್ಯ ಮಂತ್ರಿ ಶ್ರೀ ರಾಮಕೃಷ್ಣ ಹೆಗ್ಗಡೆ ಯವರ 91ನೇ ಹುಟ್ಟಿದ ಹಬ್ಬ

ಇಂದು ಭಾರತೀಯ ವಿದ್ಯಾ ಭವನ ದಲ್ಲಿ....ನಡೆದ...ಶ್ರೀ ರಾಮಕೃಷ್ಣ ಹೆಗ್ಗಡೆ ಯವರ  91ನೇ ಹುಟ್ಟು ಹಬ್ಬದ ವಿಶೇಷವಾಗಿ.....

Release of special cover on national sports day 2017

India post.. released a special cover on the occasion of national  sports day 2017.  For a tribute to major dhyan Chandra Singh, the hockey wizard.... Organised at GPO, Bangalore with.. the help of ...Karnataka state hockey association. . 

Paytm introducing big mall

ಅತಿ ದೊಡ್ಡ ಮಾಲ್ ಆಪ್

- 1000 ಬ್ರಾಂಡ್‌ಗಳನ್ನು ಹೊಂದಿದ ಅಂಗಡಿಗಳಲ್ಲಿ ಮತ್ತು 15,000 ಅಧಿಕೃತ ಚಿಲ್ಲರೆ ವ್ಯಾಪಾರಿಗಳು 65 ಲಕ್ಷಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. 

 

ಪೇಟಿಎಮ್ ಈ ಕಾಮರ್ಸ್‌ ಪ್ರೈವೇಟ್ ಲಿಮಿಟೆಡ್ ಮಾಲೀಕತ್ವದ ಪೇಟಿಎಮ್ ಮಾಲ್‌, ಭಾರತದ ಅತಿ ದೊಡ್ಡ ಆನ್‌ಲೈನ್ ಮಾಲ್ ಅನ್ನು ಈ ವರ್ಷದ ಹಬ್ಬದ ಋತುವಿಗೂ ಮುನ್ನವೇ ಆರಂಭಿಸುತ್ತಿದೆ.  ಕಂಪೆನಿಯು ತನ್ನ ಹೊಸ ಆಪ್ ಅನ್ನು 1000 ಬ್ರಾಂಡ್‌ಗಳನ್ನು ಹೊಂದಿದ ಅಂಗಡಿಗಳಲ್ಲಿ ಮತ್ತು 15,000 ಅಧಿಕೃತ ಚಿಲ್ಲರೆ ವ್ಯಾಪಾರದಲ್ಲಿ 65 ಲಕ್ಷಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡಲು ಸಜ್ಜುಗೊಳಿಸುವುದರ ಮೂಲಕ ನವೀಕೃತಗೊಳಿಸಿದೆ.  ಇದೇ ಮೊದಲ ಬಾರಿಗೆ ಪೇಟಿಎಮ್ ಮಾಲ್‌ನಲ್ಲಿ ಗ್ರಾಹಕರಿಗಾಗಿ ಹೊಸ ಅನುಭವವನ್ನು ನೀಡಲು ಬ್ರಾಂಡೆಡ್ ಉತ್ಪನ್ನಗಳನ್ನು ಪೇಟಿಎಮ್ ಆಪ್ ಮೂಲಕ ಆರ್ಡರ‍್ ಮಾಡಬಹುದಾದ ಸೌಲಭ್ಯವನ್ನು ಕಲ್ಪಿಸಿದೆ.  ಹೀಗೆ ಆರ್ಡರ‍್ ಪಡೆದ ಉತ್ಪನ್ನಗಳನ್ನು ಗ್ರಾಹಕರು ತಮ್ಮ ಹತ್ತಿರದ ಸ್ಥಳದಲ್ಲಿರುವ ಅಧಿಕೃತ ಬ್ರಾಂಡ್‌ನ ಅಂಗಡಿಗೆ ಕಳುಹಿಸಲಾಗುವುದು. 

 

ಆಫ್‌ಲೈನ್ ಚಿಲ್ಲರೆ ಮಾರಾಟಗಾರರೊಂದಿಗೆ ಮತ್ತು ಬ್ರಾಂಡ್‌ಗಳೊಂದಿಗೆ ತಂತ್ರಜ್ಞಾನದ ಸಹಭಾಗಿತ್ವವನ್ನು ಹೊಂದುವುದರ ಮೂಲಕ ಪೇಟಿಎಮ್ ಅವರುಗಳನ್ನು ಆನ್‌ಲೈನ್ ಅಂಗಡಿಗಳನ್ನು ತೆರೆಯಲು ಸಹಾಯ ಮಾಡುವ ಹಂಚಿಕೆಯನ್ನು ಹೊಂದಿದೆ.  ಇದು ಚಿಲ್ಲರೆ ಮಾರಾಟಗಾರರು ಗಳಿಕೆಯನ್ನು ಹೆಚ್ಚಿಸುವುದರೊಂದಿಗೆ ಹೊಸ ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡುವುದರ ಜೊತೆಗೆ ಆನ್‌ಲೈನ್ ಶಾಪಿಂಗ್‌ನ ಮೇಲಿರುವ ವಿಶ್ವಾಸ ಮತ್ತು ಅನುಕೊಲತೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತಿದೆ.  ಕಂಪನಿಯು ಸ್ಥಾನೀಯ ಚಿಲ್ಲರೆ ಮಾರಾಟಗಾರರೊಂದಿಗೆ ಮತ್ತು ಬ್ರಾಂಡ್‌ಗಳೊಂದಿಗೆ ಭಾಗೀದಾರರಾಗಿ ಅವರು ಏಕಮುಖವಾಗಿರುವ ದೊಡ್ಡ ಸಗಟು ಮಾರಾಟಗಾರರ ವಿರುಧ್ದದ ಹೋರಾಟದಲ್ಲಿ ಭಾಗೀದಾರರಾಗಿದ್ದಾರೆ.  ಚಿಲ್ಲರೆ ಮಾರಾಟಗಾರರ ಜೀವನದಲ್ಲಿ ಅವರ ಚಿಲ್ಲರೆ ಮಾರಾಟವನ್ನು ಹೆಚ್ಚಿಸುವುದರ ಮೂಲಕ ಅವರ ಮಾರಾಟದ ಅವಕಾಶಗಳನ್ನು ಮೊಬೈಲ್ ಮೂಲಕ ಅಭಿವೃದ್ದಿಗೊಳಿಸಿ ಹೆಚ್ಚಿನ ವ್ಯಾಪಾರವನ್ನು ನೀಡುವ ಮೂಲಕ ಮಹತ್ವದ ಪಾತ್ರವನ್ನು ನಿರ್ವಹಿಸುವ ವೇದಿಕೆಯಾಗುವ ಗುರಿಯನ್ನು ಇಟ್ಟುಕೊಂಡಿದೆ. 

 

ಗ್ರಾಹಕರಿಗೆ ವಿಶಿಷ್ಟವಾದ ಹಾಗೂ ಅಧಿಕೃತವಾದ ಬ್ರಾಂಡ್‌ಗಳನ್ನು ಅನ್ವೇಷಿಸುವ ಹಾಗೂ ಅವರ ಮೆಚ್ಚಿನ ಬ್ರಾಂಡ್‌ಗಳನ್ನು, ಬ್ರಾಂಡ್ ಆಧಾರಿತ ಅನುಭವವನ್ನು ಆಪೆಲ್, ಸ್ಯಾಮಸಂಗ್, ಎಲ್‌ಜಿ, ಓಪ್ಪೋ, ಸೋನಿ, ಎಚ್‌ಪಿ, ಲೆನಿವೂ, ಜೆಬೆಎಲ್, ಫಿಲಿಪ್ಸ್, ಪ್ಯೂಮಾ, ಅಲೆನ್ ಸೋಲಿ, ಲೀ, ಪೀಪಿ, ಲೆವೀಸ್, ವಿರೋಮೊದಾ, ವ್ಯಾನ್ ಹ್ಯುಸೇನ್, ವುಡ್‌ಲ್ಯಾಂಡ್, ಕ್ಯಾಟ್‌ವಾಕ್, ಸ್ಕೆಚರ‍್ಸ್‌, ರೆಡ್‌ಟೇಪ್, ಕ್ರಾಕ್ಸ ಅಂಡ್ ಫಾಸಿಲ್ಸ್, ಮುಂತಾದ ಬ್ರಾಂಡ್‌ಗಳನ್ನು ನೀಡುವ ಮೂಲಕ ಹೊಸ ಅನುಭವವನ್ನು ಕಲ್ಪಿಸುತ್ತಿದ್ದಾರೆ.  ಗ್ರಾಹಕರು ತಮ್ಮ ಹತ್ತಿರದ ಅಧಿಕೃತ ಬ್ರಾಂಡ್ ಮಾರಾಟಗಾರರ ಅಂಗಡಿಯ ವಿವರಗಳನ್ನು ಮತ್ತು ಸ್ಥಾನೀಯ ಚಿಲ್ಲರೆ ಮಾರಾಟಗಾರರ ಪಿನ್ ಕೋಡಿಗೆ ಅವರು ಬಯಸಿದ ಉತ್ಪನ್ನಗಳನ್ನು ಪಡೆಯಬಹುದು.  ಪೇಟಿಎಮ್ ಮಾಲ್ ಆಪ್ ಹೊಸ ಹೋಮ್ ಸ್ಕ್ರೀನ್ ಅನ್ನು ಹೊಂದಿದ್ದು ಅದು ಹೊಸ ವಸ್ತುಗಳನ್ನು ಹುಡುಕಲು ಅನುವು ಮಾಡಿಕೊಡುವುದು.  ಗ್ರಾಹಕರು ಮತ್ತು ವ್ಯಾಪಾರಗಾರರಿಗೆ ಅವರ ಆರ್ಢರನ್ನು ನೀಡುವಾಗ, ಜಿಎಸ್‌ಟಿಐಎನ್ ಸಂಖ್ಯೆಯನ್ನು ನಮೂದಿಸಲು ಅವರಿಗೆ ಅಗತ್ಯವಾದ ವಿವರಗಳನ್ನು ಅವರ ನಿರ್ದೇಶಿತ ಇನ್‌ವಾಯ್ಸ್‌ಗಳ ಮೂಲಕ ಪಡೆಯಬಹುದು ನಂತರ ಅದನ್ನು ಟ್ಯಾಕ್ಸ ಕ್ರೆಡಿಟ್ ಮಾಡಿಕೊಳ್ಳಬಹುದು. 

 

ಭಾರತದಲ್ಲಿ ಚಿಲ್ಲರೆ ಮಾರಾಟದ ವಿಭಾಗವು ಅಸಮವಾಗಿ ವಿತರಿಕೆಯಾಗಿದ್ದು, ದೊಡ್ಡ ಪಟ್ಟಣಗಳಲ್ಲಿರುವ ಗ್ರಾಹಕರಿಗೆ ಪ್ರಮುಖ ಬ್ರಾಂಡ್‌ಗಳು ಸುಲಭವಾಗಿ ಲಭ್ಯವಾಗುತ್ತಿದ್ದು ಸಣ್ಣ ಪಟ್ಟಣಗಳಲ್ಲಿ ಸೀಮಿತ  ಅಧವಾ ಅಧಿಕೃತ ಬ್ರಾಂಡ್‌ನ ಬಯಸಿದ ಉತ್ಪನ್ನಗಳನ್ನು ಪಡೆಯುವ ಯಾವುದೇ ಅವಕಾಶವಿರುವುದಿಲ್ಲ.  ಏಕೆಂದರೆ ಇಂತಹ ಗ್ರಾಹಕರಿಗೆ ಪ್ರಮುಖ ಒಳ್ಳೆಯ ನೈಜ ಉತ್ಪನ್ನಗಳನ್ನು ಕೊಳ್ಳಲು, ಬೇಡಿಕೆಯಲ್ಲಿರುವ ಬ್ರಾಂಡ್‌ಗಳು ಸುಲಭವಾಗಿ ಲಭ್ಯವಾಗುವುದಿಲ್ಲ ಆದುದರಿಂದ ಕಾಳಸಂತೆಯಲ್ಲಿ ಅಮಾಯಕ ಗ್ರಾಹಕರಿಗೆ ನಕಲಿ ಮತ್ತು ಅನಧಿಕೃತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.  ದೇಶದ ಉದ್ದಗಲಕ್ಕೂ ವಿಶ್ವಸನೀಯ ಶಾಪಿಂಗ್ ಅನುಭವವನ್ನು ನೀಡುವುದಕ್ಕಾಗಿ ಪೇಟಿಎಮ್ ಮಾಲ್ 19,000 ಪಿನ್ ಕೋಡ್‌ಗಳ ಮೂಲಕ ಗ್ಯಾರೆಂಟಿ ಇರುವ ಬ್ರಾಂಡೆಡ್ ಉತ್ಪನ್ನಗಳನ್ನು ನೀಡುತ್ತಿದೆ.  ಗ್ರಾಹಕರು ಅಸಲಿ ಉತ್ಪನ್ನಗಳನ್ನು ಅಧಕೃತ ಮಾರಾಟಗಾರರ ಮೂಲಕ ವ್ಯಾರೆಂಟಿ, ಸರ್ವೀಸ್, ಇನ್ಸ್‌ಟಲೇಶನ್ ಮತ್ತು ಇತರ ಅಗತ್ಯ ಸಹಾಯವನ್ನು ಆಫ್ಲೈನ್ ಬ್ರಾಂಡ್ ಅಂಗಡಿಯಂತೆಯೇ ಶಾಪಿಂಗ್ ಮಾಡಿದಾಗ ಪಡೆಯುವಂತೆಯೆ ಇಲ್ಲಿಯೂ ಪಡೆಯಬಹುದು. 

 

ಅಮಿತ್ ಸಿನ್ಯಾ, ಸಿಓಓ - ಪೇಟಿಎಮ್ ಮಾಲ್, ಇವರು ಹೇಳುವಂತೆ, ಭಾರತೀಯ ಗ್ರಾಹಕರು ಈಗ ಅಸಲಿ ವಸ್ತುಗಳನ್ನು ದೊಡ್ಡದಾದ ಮತ್ತು ಉತ್ತಮವಾದ ಇತರ ಮಾಲ್‌ಗಳಲ್ಲಿ ಪಡೆಯುವಂತೆ ಇಲ್ಲಿಯೂ ಕೊಳ್ಳಬಹುದು.  ನಮ್ಮ ಗುರಿಯೇನೆಂದರೆ ವಿಶ್ವಸನೀಯ ಶಾಪಿಂಗ್ ವೇದಿಕೆಯನ್ನು ನಿರ್ಮಿಸಿ ಅಲ್ಲಿ ಗ್ರಾಹಕರು ತಾವು ಬಯಸಿದ ಅಸಲಿ ಉತ್ಪನ್ನಗಳನ್ನು ಕೊಳ್ಳಲು ಮತ್ತು ಅವರಿಗೆ ಅದು ಅವರ ಸುತ್ತುಮುತ್ತಲೂ ಇರುವ ಅಧಿಕೃತ ಸ್ಥಾನೀಯ ಚಿಲ್ಲರೆ ಮಾರಾಟಗಾರರಿಂದ ದೊರಕುವಂತೆ ಮಾಡುವುದು.  ಈಕಾಮರ್ಸನಲ್ಲಿ ಸ್ಥೂಲವಾಗಿ ಎರಡು ವ್ಯಾಪಾರ ಮಾದರಿಗಳಿವೆ ಒಂದು ಪ್ರತಿ ಚಿಲ್ಲರೆ ಮಾರಾಟಗರರೊಂದಿಗೆ ಪಾಲುದಾರಿಕೆ ಹೊಂದುವುದು, ಇನ್ನೊಂದು ನೀವೇ ದೊಡ್ಡ ಚಿಲ್ಲರೆ ಮಾರಾಟಗಾರರಾಗುವುದು.  ನಮ್ಮ ದೃಷ್ಟಿಕೋನವೆನೆಂದರೆ ಮೊದಲನೆಯ ವ್ಯಾಪಾರ ಮಾದರಿಗೆ ಪ್ರೋತ್ಸಾಹ ನೀಡುವುದು.  ನಾವು ಲಕ್ಷಾಂತರ ಚಿಲ್ಲರೆ ಮಾರಾಟಗಾರರೊಂದಿಗೆ ಕೆಲಸ ಮಾಡುವುದರಲ್ಲಿ ಮತ್ತು ದೊಡ್ಡ ಉದ್ದೇಶಕ್ಕಾಗಿ ಕೆಲಸ ಮಾಡುವುದರಲ್ಲಿ ಹಾಗೂ ಒಂದು ಏಕಮುಖೀಯ ಚಿಲ್ಲರೆ ಮಾರಾಟಗಾರರಾಗುವುದನ್ನು ನಂಬುತ್ತೆವೆ.  ಇದಕ್ಕಾಗಿ ನಾವು ಅಂಗಡಿಕಾರರನ್ನು ಮತ್ತು  ಬ್ರಾಂಡ್‌ಗಳನ್ನು ತಮ್ಮ ವ್ಯಾಪಾರದಲ್ಲಿ ತಂತ್ರಜ್ಞಾನ ಆಧಾರಿತ ವ್ಯಾಪಾರಕ್ಕಾಗಿ ಪಾಲುದಾರರಾಗಲು ಆಹ್ವಾನಿಸುತ್ತಿದ್ದೆವೆ.  ನಾವು ಭಾರತದ ಅತಿದೊಡ್ಡ ವಿಶ್ವಸನೀಯ ಚಿಲ್ಲರೆ ಮಾರಾಟ ವ್ಯವಸ್ಥೆಯನ್ನು ರೂಪಿಸುವ ಹಂಚಿಕೆಯಲ್ಲಿ ತೊಡಗಿದ್ದೆವೆ. 

 

ಪೇಟಿಎಮ್ ಮಾಲ್, ತನ್ನ ಮಾಲ್‌ನಲ್ಲಿ, ತಂತ್ರಜ್ಞಾನ ಹೊಂದಿರುವ ಅಧಿಕೃತ ಬ್ರಾಂಡ್ ಮಾರಾಟಗಾರರನ್ನು ಹೊಂದಲು ಸಜ್ಜಾಗಿದೆ.  ದೇಶದ ಪ್ರತಿಯೊಂದು ಪಟ್ಟಣದಲ್ಲಿ ಈ ಅಂಗಡಿಗಳು ಎಲ್ಲಾ ಬ್ರಾಂಡ್‌ಗಳನ್ನು ತನ್ನ ಬಂಡವಾಳವನ್ನು ನಿಯುಂತ್ರಿಸಲು, ಪ್ರಾಯೋಜಿಸಲು, ಮತ್ತು ಮರುಪಡೆಯುವ ಹಾಗೂ ಬದಲಾಯಿಸುವ ಪಾಲಿಸಿಗಳನ್ನು ಮತ್ತು ತಮ್ಮ ಹರವನ್ನು ವಿಸ್ತಾರ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.  ಇದರಿಂದ ಲಕ್ಷಾಂತರ ಗ್ರಾಹಕರಿಗೆ ಆನ್‌ಲೈನ್ ಬ್ರಾಂಡ್ ಅಂಗಡಿಗಳಲ್ಲಿ, ಸಂಪೂರ್ಣವಾದ ಕ್ಯಾಟಲಾಗ್ ಅನ್ನು ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡಲು ಅನುವು ಮಾಡಿಕೊಡುತ್ತದೆ. 

 

Monday 28 August 2017

ಉತ್ತಮ ಪ್ರಜಾ ಪಕ್ಷ

ಇದು ಪ್ರಾದೇಶಿಕ ಪಕ್ಷಗಳ ಯುಗ. ದಿನಗಳೆದಂತೆ ನಾನಾ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ನೇಪಥ್ಯಕ್ಕೆ ಸರಿಯುತ್ತಿವೆ. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಆದ್ಯತೆ ಕೊಡದೇ ಹೋಗಿರುವುದೇ ಇದಕ್ಕೆ ಕಾರಣ. ರಾಜ್ಯದಲ್ಲೂ ಇಂಥದ್ದೇ ವಾತಾವರಣ ನಿರ್ಮಾಣ ಆಗಿರುವುದರಿಂದ ಜನ ಪ್ರಾದೇಶಿಕ ಪಕ್ಷಗಳತ್ತ ಆಸೆಗಣ್ಣಿನಿಂದ ನೋಡುತ್ತಿರುವ ಈ ಕಾಲದಲ್ಲಿ..ಉಪೇಂದ್ರ ರವರ ಈ ಉತ್ತಮ ಪ್ರಜಾ ಪಕ್ಷ...ಹೇಗೆ.. ಮುಂದುವರೆಯುತ್ತಾರೆಂದು..ಕಾದು ನೋಡಬೇಕು.

ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಬಹಳ ಕಷ್ಟಪಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿದ್ದಲ್ಲದೇ ಮೂರು ಹೋಳಾಗಿ ವಿಭಜನೆಗೊಂಡಿದೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಏಕಪಕ್ಷ ಸರ್ಕಾರ ರಚನೆಗೆ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳದ ನಡುವೆ ನೇರ ಸಂಘರ್ಷ ಏರ್ಪಟಿದ್ದು, ಕೆಜೆಪಿ, ಬಿಎಸ್‌ಆರ್ ಸೇರಿದಂತೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪಕ್ಷಗಳು ರಾಜಕೀಯ ಕೆಮಿಸ್ಟ್ರಿ ಬದಲಿಸಬಹುದು ಎಂದು ಕೊಂಡಿದ್ದು ಸುಳ್ಳಾಯಿತು.

ರಾಷ್ಟ್ರೀಯ ಪಕ್ಷಗಳ ವರ್ತನೆ ಬಗ್ಗೆ ಜನ ಬೇಸತ್ತಿದ್ದಾರೆ. ತಮ್ಮ ಬೇಸರಕ್ಕೆ ಪರಿಹಾರ ಪ್ರಾದೇಶಿಕ ಪಕ್ಷ ಎಂದು ಮನಗಂಡಿದ್ದಾರೆ. ಆದರೆ ಹಳೇ ಮತ್ತು ಹೊಸ ಪಕ್ಷಗಳ ನಡುವೆ ಅವರ ಆಯ್ಕೆ ಏನು, ಅವರು ಹೇಗೆ ವರ್ತಿಸುತ್ತಾರೆ, ಯಾವ ದೃಷ್ಟಿಕೋನದಿಂದ ನೋಡುತ್ತಾರೆ ಎಂಬುದು ನಿಘಂಟಾಗಿ ಉಳಿದಿದೆ ಎಂದು 'ಕನ್ನಡಪ್ರಭ'ಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂದರ್ಶನದ ಸಂಕ್ಷಿಪ್ತ ಪಾಠ ಹೀಗಿದೆ:

'ಈ ರಾಜ್ಯದಲ್ಲಿ ಒಂದು ಪಕ್ಷದ ಸರ್ಕಾರ ರಚನೆಗೆ ಹೋರಾಟ ನಡೆದಿದೆ. ಜನರ ಬಯಕೆ ಇದೇ ಆಗಿದೆ. ಈ ಹೋರಾಟದ ಮುಂಚೂಣಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಇದೆ. ತಮ್ಮ-ತಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು, ಬರುತ್ತದೆಂದು ಎಲ್ಲರೂ ಹೇಳಿಕೊಳ್ಳುತ್ತಾರೆ.         

ಆದರೆ ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಹೊಸ ಪಕ್ಷಗಳ ಸೃಷ್ಟಿ ರಾಜಕೀಯ ವಾತಾವರಣ ಬದಲಿಸಿದೆ. ಅವುಗಳು ಅಧಿಕಾರದ ಬಳಿ ಸುಳಿಯದಿದ್ದರೂ ಮತ್ತೊಂದು ಪಕ್ಷದ ಮತಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಯಾವ ಪಕ್ಷ ಇನ್ಯಾವ ಪಕ್ಷದ ಮತಗಳ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.'

'ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಮ್ಮಿಶ್ರ ಸರಕಾರಗಳ ಯುಗ ಆರಂಭವಾಗಿ ಬಹಳ ಸಮಯವಾಗಿದೆ. ಕೇಂದ್ರದಲ್ಲಿ ಏಕಪಕ್ಷ ಸರಕಾರ ರಚನೆಯಾಗಿದ್ದರು.. ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆಯಲು..ಸಾಧ್ಯವಾಗುದೆ ಎಂಬುದು....ಸ್ಪಷ್ಟವಿಲ್ಲ. ರಾಷ್ಟ್ರೀಯ ಪಕ್ಷಗಳು ಜನರ ವಿಶ್ವಾಸ ವಿಮುಖತೆ ಇದಕ್ಕೆ ಕಾರಣ. ತತ್ಪರಿಣಾಮವಾಗಿ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಕಂಡುಕೊಂಡಿವೆ. ರಾಷ್ಟ್ರೀಯ ಪಕ್ಷಗಳ ಕೈಯಿಂದ ಅಧಿಕಾರ ಬಾಚಿಕೊಂಡಿವೆ.  ಇದು ನಿಧಾನವಾಗಿ ರಾಜ್ಯ ಮಟ್ಟದಲ್ಲೂ ಸ್ಥಾನ ಪಡೆದುಕೊಳ್ಳುತ್ತಿದೆ. ಅಲ್ಲೊಂದು-ಇಲ್ಲೊಂದು ಅಪವಾದ ಇರಬಹುದು. ಆದರೆ ಇದು ಪ್ರಾದೇಶಿಕ ಪಕ್ಷಗಳ ಯುಗ ಎನ್ನುವುದರಲ್ಲಿ ಎರಡು ಮಾತಿಲ್ಲ.'

'ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರ ಮತ್ತು ರಾಜ್ಯ ಎರಡೂ ಕಡೆ ಅಭದ್ರ, ಅನಿಶ್ಚಿತ ರಾಜಕೀಯ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಹಿಡಿತದ ರಾಜಕೀಯ ಇತಿಹಾಸ. ಸ್ವಾತಂತ್ರ್ಯ ನಂತರ ನೆಹರೂ ಅವರ ನಾಯಕತ್ವದಿಂದ ಹಿಡಿದು ಈಗಿನ ಸೋನಿಯಾ ಗಾಂಧಿ ಅವರ ನಾಯಕತ್ವದವರೆಗೂ 62 ವರ್ಷಗಳ ಪೈಕಿ 52 ವರ್ಷಗಳ ಆಳ್ವಿಕೆ ಕಾಂಗ್ರೆಸ್ ಪಾರುಪಥ್ಯದಲ್ಲೇ ನಡೆದಿದೆ. ನೆಹರು 15 ವರ್ಷ, ಇಂದಿರಾಗಾಂಧಿ 17, ರಾಜೀವ್ ಗಾಂಧಿ 6, ಪಿ.ವಿ. ನರಸಿಂಹರಾವ್ 5 ಹಾಗೂ ಮನಮೋಹನಸಿಂಗ್ 9 ವರ್ಷ ಅಧಿಕಾರ ನಡೆಸಿದ್ದಾರೆ. ಕಾಂಗ್ರೆಸ್ಸೇತರ ಹಾಗೂ ಕಾಂಗ್ರೆಸ್ ಬೆಂಬಲಿತ ಸರಕಾರಗಳ ಪೈಗಿ ಪೈಕಿ ವಿ.ಪಿ. ಸಿಂಗ್ 13 ತಿಂಗಳು, ಚರಣ್‌ಸಿಂಗ್ 6 ತಿಂಗಳು, ಚಂದ್ರಶೇಖರ್ 6 ತಿಂಗಳು, ತಾವು (ದೇವೇಗೌಡ) 11 ತಿಂಗಳು, ಐ.ಕೆ. ಗುಜ್ರಾಲ್ 7 ತಿಂಗಳು, ವಾಜಪೇಯಿ ಅವರು ಒಟ್ಟು ಆರು ವರ್ಷ ಅಧಿಕಾರ ನಡೆಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಇರಲಿ, ಕಾಂಗ್ರೆಸ್ಸೇತರ ಸರಕಾರ ಇರಲಿ ಅವುಗಳು ಸಮ್ಮಿಶ್ರ ಸರಕಾರದ ಸ್ವರೂಪದಲ್ಲೇ ಅಧಿಕಾರ ನಡೆಸುತ್ತಿವೆ. ಇದಕ್ಕೆ ಕಾರಣ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರಲ್ಲಿ ಮೂಡಿರುವ ಬೇಸರ, ತತ್ಪರಿಣಾಮವಾಗಿ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚುತ್ತಿರುವ ಮಾನ್ಯತೆ.'

ಕೆಲವು ರಾಜ್ಯಗಳಲ್ಲಂತೂ 24 ಗಂಟೆಯೊಳಗೇ ಮುಖ್ಯಮಂತ್ರಿಗಳು ಬದಲಾದರು. ದಿಲ್ಲಿಯಿಂದ ಬರುವ ಲಕೋಟೆಗಳು ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಿದ್ದವು. ಇಂದಿರಾಗಾಂಧಿಯವರು ಪ್ರಧಾನಿ ಆದಾಗ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರಾದರು ದೇಶದ ಎಲ್ಲ ರಾಜ್ಯ ಸರಕಾರಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಮುಂದಾದರು. ತಮಿಳುನಾಡು ಮುಖ್ಯಮಂತ್ರಿ ಕಾಮರಾಜ್, ಎಂ.ಜಿ. ರಾಮಚಂದ್ರನ್  ಅವರು ಇಂದಿರಾಗಾಂಧಿ ಅವರಿಗೆ ಸಮೀಪವರ್ತಿ ಆಗಿದ್ದರು. ಆದರೆ ಯಾವಾಗ ಭಾಷೆ ಆಧಾರಿತ ಕಿಡಿ ಜ್ವಾಲಾಮುಖಿ ಸ್ವರೂಪ ಪಡೆಯಿತೋ ಡಿಎಂಕೆ ಎಂಬ ಪ್ರಾದೇಶಿಕ ಪಕ್ಷ ಉದಯಿಸಿತು, ಅಧಿಕಾರಕ್ಕೂ ಬಂತು. ನಂತರ ಅದು ಡಿಎಂಕೆ, ಅಣ್ಣಾಡಿಎಂಕೆ ಎಂದು ಇಬ್ಭಾಗ ಆಯಿತಾದರೂ ಅಧಿಕಾ ರ ಮಾತ್ರ ಸರದಿ ಮೇಲೆ ಅವುಗಳಲ್ಲಿ ಕೇಂದ್ರಿಕೃತ ಆಯಿತೆ ಹೊರತು ಕಾಂಗ್ರೆಸ್ ಕೈಗೆ ಸಿಗಲಿಲ್ಲ. ಅಲ್ಲಿಂದ ಆರಂಭವಾದ ಪ್ರಾದೇಶಿಕ ಪಕ್ಷಗಳ ಯಶಸ್ವಿ ಶಖೆ ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸುತ್ತಾ ಹೋಯಿತು. ಕೇರಳದಲ್ಲಿ ಎನ್‌ಡಿಎಫ್, ಯುಡಿಎಫ್, ಪಶ್ಚಿಮ ಬಂಗಾಳದಲ್ಲಿ ಎಡಪಕ್ಷ, ನಂತರ ತೃಣಮೂಲ ಕಾಂಗ್ರೆಸ್, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಪ ಪಕ್ಷ, ಬಿಹಾರದಲ್ಲಿ ಆರ್‌ಜೆಡಿ, ಜೆಡಿ(ಯು), ಒರಿಸ್ಸಾದಲ್ಲಿ ಬಿಜು ಜನತಾ ದಳ, ಮಹಾರಾಷ್ಟ್ರದಲ್ಲಿ ಶಿವಸೇನೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ತತ್ವದ ಆಧಾರದ ಮೇರೆಗೆ ಅಧಿಕಾರ ಕಂಡವು. ಅದೇ ರೀತಿ ಈಶಾನ್ಯ ರಾಜ್ಯಗಳಲ್ಲೂ ಕಾಂಗ್ರೆಸ್ ಹಿಡಿತ ಕಳೆದುಕೊಂಡಿತು.'

'ಕರ್ನಾಟಕದಲ್ಲಿ 1983 ರಲ್ಲೇ ಜನತಾ ಪಕ್ಷ ನೇತೃತ್ವದಲ್ಲಿ ಕಾಂಗ್ರೆಸ್ಸೇತರ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂತು. ಅಲ್ಲಿಂದಲೇ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಯುಗ ಆರಂಭವಾಯಿತು. ಅದಕ್ಕೆ ಮೊದಲು ಕಾಂಗ್ರೆಸ್ ಸರಕಾರಕ್ಕೆ ಅದರ ನಾಯಕರೇ ಮುಳ್ಳಾಗುತ್ತಿದ್ದರು. ಭಿನ್ನಮತ ಆಟಿಕೆಯಂತಾಗಿತ್ತು. 1985 ರಲ್ಲಿ ಆಂಧ್ರದಲ್ಲಿ ಎನ್.ಟಿ. ರಾಮರಾವ್ ಸರಕಾರ ಕಿತ್ತೊಗೆದಾಗ ಅವರಿಗೆ ಆಶ್ರಯ ಕೊಟ್ಟದ್ದು ರಾಜ್ಯದ ಜನತಾ ಪಕ್ಷ ಸರಕಾರದ ಮುಖಂಡರು. ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆ ಅರಿವಾಗಿದ್ದೆ ಆಗ. ನಂತರ 1989 ರಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತಾದರೂ ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಪಿ ಮೂವರು ಮುಖ್ಯಮಂತ್ರಿಗಳನ್ನು ಕಾಣುವಂತಾಯಿತು. ಜನ ಇದರಿಂದ ಬೇಸತ್ತು ಜನತಾ ದಳಕ್ಕೆ ಅಧಿಕಾರ ಕೊಟ್ಟರು. ತಾವು ಮುಖ್ಯಮಂತ್ರಿ ಆಗಿದ್ದರ ಜತೆಗೆ ಮುಂದೆ ಕೇಂದ್ರದಲ್ಲೂ ಪ್ರಾದೇಶಿಕ ಪಕ್ಷಗಳ ಸಂಯುಕ್ತ ಸರಕಾರ ಅಸ್ತಿತ್ವಕ್ಕೆ ಬಂದಾಗ ಪ್ರಧಾನಿ ಹುದ್ದೆಯೂ ದೊರೆಯಿತು. ಪ್ರಾದೇಶಿಕ ಪಕ್ಷಕ್ಕೆ ದೊರೆತ ಅಗ್ರಮಾನ್ಯ ಸ್ಥಾನಮಾನ ಅದು. ನಂತರ 1999 ರ ಹೊತ್ತಿಗೆ ಜನತಾ ದಳ ಇಬ್ಭಾಗ ಆಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು. ತದನಂತರ 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಬಂತು. ಮಹಾರಾಷ್ಟ್ರ ಮಾದರಿ ಸರಕಾರ ರಚನೆಯಾಗಿ ಕಾಂಗ್ರೆಸ್‌ನ ಧರ್ಮಸಿಂಗ್ ಮುಖ್ಯಮಂತ್ರಿಯಾದರು.

ನಂತರ ಕಾಂಗ್ರೆಸ್‌ನ ಆಸೆಬುರುಕತನದಿಂದ ಸರಕಾರ ಪಲ್ಲಟವಾಗಿ, ತಮ್ಮ ಸಮ್ಮತಿ ಇಲ್ಲದ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ನಂತರ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲಿಲ್ಲ ಎಂಬುದನ್ನು ಮುಂದೆ ಮಾಡಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಈ ಸರಕಾರದಲ್ಲಿ ಏನೇನು ನಡೆಯಿತು, ಏನೇನು ಅನಾಹುತ ಆಯಿತು, ಮೂವರು ಮುಖ್ಯಮಂತ್ರಿಗಳು ಏಕೆ ಬಂದರು ಎಂಬುದು ಎಲ್ಲರ ಕಣ್ಣ ಮುಂದೆಯೇ ಇದೆ. ಕಳೆದು ಐದು ವರ್ಷದಲ್ಲಿ ಆಡಳಿತ ಹದಗೆಟ್ಟು ಜನ ರಾಜಕೀಯದ ಬಗ್ಗೆ ಜುಗುಪ್ಸೆ ಪಡುವಂತಾಗಿದೆ. ಇಂಥ ರಾಜಕೀಯ ಸನ್ನಿವೇಶ ನಿರ್ಮಾಣಕ್ಕೆ ಕಾಂಗ್ರೆಸ್ ಹೊಣೆಯೋ, ಜೆಡಿಎಸ್ ಹೊಣೆಯೋ ಎಂಬುದು ಈಗ ಅಗ್ನಿಪರೀಕ್ಷೆಗೆ ಬಂದು ನಿಂತಿದೆ. ಸತ್ಯ ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಒಂದು ಮಾತು ಸತ್ಯ. ರಾಷ್ಟ್ರೀಯ ಪಕ್ಷಗಳು ಏನನ್ನು ಮಾಡಿವೆ, ರಾಜ್ಯವನ್ನು ಎಲ್ಲಿಗೆ ತಂದು ನಿಲ್ಲಿಸಿವೆ ಎಂಬುದನ್ನು ಜನ ಚೆನ್ನಾಗಿ ಮನಗಂಡಿದ್ದಾರೆ. ಪ್ರಾದೇಶಿಕ ಪಕ್ಷದ ಬಗ್ಗೆ ಭರವಸೆಯಿಂದ ನೋಡುತ್ತಿದ್ದಾರೆ. ಜೆಡಿಎಸ್ ಜತೆಗೆ ಇನ್ನೂ ಒಂದಷ್ಟು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ. ಅವುಗಳ ಮೂಲ ಏನು, ಯಾವ ಉದ್ದೇಶಕ್ಕೆ ಅವು ಸೃಷ್ಟಿಯಾದವು, ಅವುಗಳು ಮುಂದಿನ ಚುನಾವಣೆಯಲ್ಲಿ ಬೀರುವ ಪರಿಣಾಮ ಏನು ಎಂಬುದು ಬರೀ ಜನರಿಗಷ್ಟೇ ಅಲ್ಲ, ರಾಜಕೀಯ ರಂಗದಲ್ಲೂ ಕುತೂಹಲ ಮೂಡಿಸಿದೆ. ಇಷ್ಟೆಲ್ಲದರ ಮಧ್ಯೆ ಜೆಡಿಎಸ್ ಜನರಲ್ಲಿ ಭಾವನೆ, ಭರವಸೆ, ನಿರೀಕ್ಷೆ ಮೂಡಿಸಿದೆ. ಚುನಾವಣೆ ಹತ್ತಿರದಲ್ಲೇ ಇದೆ. ಮಾತು ಎಷ್ಟೇ ಆಡಿದರೂ ಮಾತಷ್ಟೇ. ನೈಜ ಸ್ಥಿತಿ ಹೊರಹೊಮ್ಮುವುದು ಚುನಾವಣೆಯಲ್ಲೇ. ಕಾಂಗ್ರೆಸ್ ತಮ್ಮ ಸಮೀಪ ಪ್ರತಿಸ್ಪರ್ಧಿ. ಏಕಪಕ್ಷ ಸರಕಾರ ಜನರ ಆಶಯ. ನೋಡೋಣ ಏನಾಗುತ್ತದೋ.

Sunday 27 August 2017

6 stories.... Which has changed your lifes.

*6 LITTLE🌱STORIES*
         -----:-:-:-:-:----


                  🌾
                { 1 }

ಒಮ್ಮೆ ಗ್ರಾಮದ ಎಲ್ಲಾ ಜನರು ಸೇರಿ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದರು ಆದರೆ ಮಗುವೊಂದು  ಛತ್ರಿ ತಂದಿತ್ತು
                  👇
                ಇದೇ ನೋಡಿ
                 *ನಂಬಿಕೆ*
         -----------------

                  🌾
                { 2 }

ಮಗುವನ್ನು ಮೇಲಕ್ಕೆ ಎಸೆದಾಗ ಅದು ನಗುತ್ತೆ ಯಾಕೆಂದರೆ ನೀವು ಅದನ್ನು ಹಿಡಿಯುತ್ತೀರೆಂದು
                 👇
              ಇದೇ ನೋಡಿ
              *ವಿಶ್ವಾಸ*
       ------------------

                  🌾
                { 3 }

ಪ್ರತೀ ದಿನ ರಾತ್ರಿ ಮಲಗಲು ಹೋಗುವಾಗ ಮರುದಿವಸ ನಾವು ಜೀವಂತ ಇರುವೆವೊ ಇಲ್ಲವೊ ಎಂಬ ಅರಿವು ಇಲ್ಲದಿದ್ದರೂ ಅಲರಾಮ್ ಇಡುತ್ತೇವೆ
                 👇
              ಇದೇ ನೋಡಿ
               *ಭರವಸೆ*
       -----------------

                   🌾
                 { 4 }

ಭವಿಷತ್ ನ ಬಗ್ಗೆ ಜ್ಞಾನವಿಲ್ಲದಿದ್ದರೂ ನಾಳೆಗಾಗಿ ನಾವು ದೊಡ್ಡ ಯೋಜನೆಗಳನ್ನು ಮಾಡುತ್ತೇವೆ
                
                 👇
             ಇದೇ ನೋಡಿ
          *ಆತ್ಮವಿಶ್ವಾಸ*
        -------------------

                  🌾
                { 5 }

ಇತರರ ಕಷ್ಟವನ್ನು ವೀಕ್ಷಿಸುತ್ತೇವೆ ಆದರೂ ಮದುವೆ ಮಾಡಿಕೊಳ್ಳುತ್ತೇವೆ 
                
                 👇
               ಇದೇ ನೋಡಿ
                *ಪ್ರೀತಿ*                           
      --------------------
                  
                    🌾
                   {6}

ಒಬ್ಬ ವೃದ್ದನ ಶರ್ಟಿನ ಮೇಲೆ ಬರೆದಿರುತ್ತೆ
_'I Am Not 60 Years Old.., I Am Sweet 16 with 44 years Experience.'_

                  👇
               ಇದೇ ನೋಡಿ
             *ದೃಷ್ಟಿಕೋನ*
           ---------------

_Do live your life like 6 stories ☺✌

ನಿಮ್ಮ ರಾಶಿಯ ಯಾವುದೆಂದು ತಿಳಿದಿಕೊಳ್ಳಿ

] ಪ್ರಬಲ ರಾಶಿಫಲದಲ್ಲಿ ಹುಟ್ಟಿರುವುದೇ ಕೆಲವರಿಗೆ ವರದಾನವಾಗಿ ಪರಿಣಮಿಸುತ್ತದೆ. ಅದರಲ್ಲಿಯೂ ಐದು ವಿಶಿಷ್ಟ ರಾಶಿಗಳು ಅತಿ ಹೆಚ್ಚು ಪ್ರಬಲವೆಂದು ಪರಿಗಣಿಸಲಾಗಿದೆ. ಇಂದು ಈ ರಾಶಿಯ ವ್ಯಕ್ತಿಗಳ ಲಕ್ಷಣಗಳ ಬಗ್ಗೆ ವಿವರಿಸಲಾಗಿದ್ದು ಇವುಗಳಲ್ಲಿ ನಿಮ್ಮ ಜನ್ಮರಾಶಿ ಇದೆಯೇ? ಇದ್ದರೆ ಇದರಲ್ಲಿ ವಿವರಿಸಲಾಗಿರುವ ಮಾಹಿತಿ ಎಷ್ಟು ಮಟ್ಟಿಗೆ ನಿಮಗೆ ಅನ್ವಯಿಸುತ್ತದೆ ಎಂಬುದನ್ನು ಹೋಲಿಸಿ ನೋಡಲು ಒಂದು ಉತ್ತಮ ಅವಕಾಶವಾಗಿದೆ...
ಮೇಷ
ಈ ವ್ಯಕ್ತಿಗಳು ಸಾಮಾನ್ಯವಾಗಿ ಎದೆಗಾರಿಕೆಯುಳ್ಳವರಾಗಿದ್ದು ಜೀವನದಲ್ಲಿ ದೊಡ್ಡ ಹಂತವನ್ನು ಏರಲು ಶಕ್ತರಾಗಿರುತ್ತಾರೆ. ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲು ಇವರು ಒಂದು ಹೆಜ್ಜೆ ಮುಂದೆ ಹೋಗಲು ಅಗತ್ಯವಿರುವ ಶಕ್ತಿ ಹಾಗೂ ಸ್ವಪ್ರೇರಣೆಯನ್ನು ಹೊಂದಿದ್ದು ಇದೇ ಈ ವ್ಯಕ್ತಿಗಳನ್ನು ಉಳಿದವರಿಗಿಂತ ಭಿನ್ನವಾಗಿಸುತ್ತದೆ. ಆದರೆ ತದ್ವಿರುದ್ಧವಾಗಿ ತಮ್ಮ ನಿಲುವಿಗೆ ಹೆಚ್ಚು ಬದ್ಧರಾಗಿರುವ ಇವರು ಹೆಚ್ಚು ಹಠಮಾರಿಗಳೂ ಆಗಿರುತ್ತಾರೆ. ನೀವು ಬಚ್ಚಿಟ್ಟ ವಿಚಾರಗಳನ್ನು ರಾಶಿಚಕ್ರ ಬಿಚ್ಚಿಡುತ್ತದೆ ಹುಷಾರು!
ಕರ್ಕಾಟಕ
ಈ ರಾಶಿಫಲದ ವ್ಯಕ್ತಿಗಳೂ ಪ್ರಬಲರಾಗಿದ್ದು ವಿಶೇಷವಾಗಿ ಉತ್ತಮ ಪ್ರೇಮಿಗಳೂ ಇತರರ ಬಗ್ಗೆ ಕಾಳಜಿ ವಹಿಸುವವರೂ ಆಗಿರುತ್ತಾರೆ. ಇವರು ಸದಾ ಮುನ್ನುಗ್ಗುವ ವ್ಯಕ್ತಿತ್ವದವರಾಗಿದ್ದು ಇದಕ್ಕಾಗಿ ಇವರ ಕೊರತೆಗಳು ಎಂದೂ ಅಡ್ಡಿಯಾಗುವುದಿಲ್ಲ. ಇವರು ತಮ್ಮ ಗುರಿಯತ್ತ ಹೆಚ್ಚು ಗಮನ ಹರಿಸುವವರಾಗಿದ್ದು ತಾವು ಕಾಳಜಿ ವಹಿಸುವ ವ್ಯಕ್ತಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲೂ ಹಿಂಜರಿಯದವರಾಗಿರುತ್ತಾರೆ. ತಾವು ಸಾಧಿಸಬಹುದಾದ ಗುರಿಗಳನ್ನೇ ಹಿಂಬಾಲಿಸಿ ಹೋಗುವ ಇವರು ತಮಗೆ ತಾವೇ ಪ್ರೇರೇಪಿಸುವಂತಹವರಾಗಿರುತ್ತಾರೆ.
ಸಿಂಹ
ಈ ರಾಶಿಫಲ ಅತ್ಯಂತ ಪ್ರಮುಖವಾಗಿದೆ. ಈ ವ್ಯಕ್ತಿಗಳು ಜನ್ಮತಃ ನಾಯಕತ್ವದ ಗುಣಗಳನ್ನು ಪಡೆದು ಬಂದಿದ್ದು ಕೆಲವು ವಿಷಯಗಳನ್ನು ಸ್ವತಃ ಪ್ರಾರಂಭಿಸುವವರಾಗಿರುತ್ತಾರೆ. ಇವರು ತಮ್ಮ ಕೆಲಸವನ್ನು ಸಾಧಿಸಲು ಪ್ರತಿಬಾರಿಯೂ ತಮಗೆ ತಾವೇ ಪ್ರೇರೇಪಿಸುವವರಾಗಿರುತ್ತಾರೆ. ಇವರಿಗೆ ಸಿದ್ಧಿಸಿದ ವಿಶೇಷ ಕೌಶಲ್ಯದ ಪರಿಣಾಮವಾಗಿ ಇವರು ತಮ್ಮ ಸುತ್ತಲಿನವರ ಮನೋಭಾವವನ್ನು ತಮಗೆ ಅನುಕೂಲವಾಗುವಂತೆ ಬದಲಿಸಬಲ್ಲವರಾಗಿರುತ್ತಾರೆ. ವಿಶೇಷವಾಗಿ ಇವರ ವಾಕ್ಚಾತುರ್ಯ. ಇವರ ಒಂದೇ ಋಣಾತ್ಮಕ ಶಕ್ತಿ ಎಂದರೆ ಈ ಗುಣದಿಂದ ಇವರಿಗೆ ಲಭಿಸಿರುವ ಅಹಂಕಾರವಾಗಿದೆ. ವೃಶ್ಚಿಕ ಈ ರಾಶಿಫಲದಲ್ಲಿ ಹುಟ್ಟಿದ ವ್ಯಕ್ತಿಗಳು ತಮ್ಮ ವೃತ್ತಿ ವಲಯದಲ್ಲಿ ಪ್ರಚಂಡರಾಗಿರುತ್ತಾರೆ. ಇವರಿಗೆ ತಮ್ಮ ಕನಸನ್ನು ನನಸಾಗಿಸಲು ಈ ಪ್ರಚಂಡತೆ ನೆರವಾಗುತ್ತದೆ. ತಮ್ಮ ಕೆಲಸ ಸಾಧಿಸಲು ಇವರು ಘೋರ ಯತ್ನ ಮಾಡುತ್ತಾರೆ ಹಾಗೂ ಇವರನ್ನು ಅರಿತವರು ಇವರ ಸಂಗವನ್ನು ಇಷ್ಟಪಡುತ್ತಾರೆ. ಆದರೆ ಕಲವೊಮ್ಮೆ ಇವರು ತಮ್ಮ ಬಗ್ಗೆ ಕೊಚ್ಚಿಕೊಳ್ಳುವ ಮೂಲಕ ಅವಹೇಳನೆಗೂ ಒಳಗಾಗುತ್ತಾರೆ. ಈ ಅವಗುಣವೊಂದನ್ನು ಅಲಕ್ಷಿಸಿದರೆ ಇವರು ಉತ್ತಮ ವ್ಯಕ್ತಿಗಳೂ, ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನಿಸುವವರೂ ಆಗಿದ್ದಾರೆ. ಪ್ರೀತಿಯ ಭಾವನೆಗಳ ಮೇಲೂ ರಾಶಿ ಚಕ್ರದ ಪ್ರಭಾವ ಬೀರಬಹುದು!
ಕುಂಭ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ತೀಕ್ಷ್ಣ ಬುದ್ಧಿಮತ್ತೆಗೆ ಹೆಸರಾಗಿದ್ದಾರೆ. ಈ ವ್ಯಕ್ತಿಗಳು ತಮ್ಮ ವಯಸ್ಸಿಗೆ ಮೀರಿದ ಬುದ್ಧಿವಂತಿಕೆಯನ್ನು ಪ್ರಕಟಿಸುವವರಾಗಿದ್ದು ಯಾವುದೇ ಸಮಸ್ಯೆಗೆ ಸುಲಭವಾದ ಪರಿಹಾರವನ್ನು ಒದಗಿಸುವ ಚಾಣಾಕ್ಷತೆಯನ್ನು ಹೊಂದಿರುತ್ತಾರೆ. ಎಷ್ಟೇ ಜಟಿಲವಾದ ಸಮಸ್ಯೆ ಇದ್ದರೂ ಇವರು ಸುಲಭವಾದ ಪರಿಹಾರವನ್ನು ಕಂಡುಕೊಂಡು ಪರಿಹಾರವನ್ನು ಪಡೆದುಕೊಳ್ಳುತ್ತಾರೆ.

ತುಪ್ಪ... ತಿಂದರೆ ಏನಾಗುತ್ಹೆ...ಗೊತ್ತಾ ನಿಮಗೆ


ತೂಕ ಕಳೆದುಕೊಳ್ಳುವವರಿಗೆ ಹೆಚ್ಚಿನವರು ತುಪ್ಪವನ್ನು ತಿನ್ನದೇ ಇರುವಂತೆ ಸಲಹೆ ಮಾಡುತ್ತಿದ್ದರೆ ಇಲ್ಲಿ ತುಪ್ಪ ತಿನ್ನಲು ಸಲಹೆ ಮಾಡಲಾಗುತ್ತಿದೆಯೆಲ್ಲಾ ಎಂಬ ಗೊಂದಲ ಯಾರಿಗಾದರೂ ಉಂಟಾಗಬಹುದು. ತುಪ್ಪವನ್ನು ಭಾರತೀಯ ಅಡುಗೆಗಳಲ್ಲಿ ಶತಮಾನಗಳಿಂದ ಉಪಯೋಗಿಸಲಾಗುತ್ತಾ ಬರಲಾಗುತ್ತಿದೆ. ಆದರೆ ಸಾಮಾನ್ಯ ತಾಪಮಾನದಲ್ಲಿ ಗಟ್ಟಿಯಾಗುತ್ತದೆ ಎಂಬ ಒಂದೇ ಕಾರಣವನ್ನು ಹಿಡಿದುಕೊಂಡು ಇದನ್ನು ಅನಾರೋಗ್ಯವೆಂದು ಪ್ರಚಾರನೀಡಿ ಇದರ ಬಳಕೆಯನ್ನು ಕಡಿಮೆಗೊಳಿಸುವಲ್ಲಿ ವಿದೇಶಿ ಕೈವಾಡ ಖಂಡಿತಾ ಇದೆ. ಹೆರಿಗೆಯ ನಂತರ, ತುಪ್ಪದ ಡಬ್ಬಿಯನ್ನು ಪಕ್ಕಕ್ಕೆ ಸರಿಸಿ..!

 

ಏಕೆಂದರೆ ಅವರಲ್ಲಿ ಈಗಾಗಲೇ ಭಾರೀ ಪ್ರಾಮಾಣದಲ್ಲಿ ಸಂಗ್ರಹವಾಗಿರುವ ಪಾಮ್ ಎಣ್ಣೆ ಅನಾರೋಗ್ಯಕರವಾಗಿದ್ದು ಇದನ್ನು ತೃತೀಯ ರಾಷ್ಟ್ರಗಳಿಗೆ ದಾಟಿಸುವ ಯತ್ನದ ಪರಿಣಾಮವೇ ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಅನಾರೋಗ್ಯಕರ ಎಂದು ಘೋಷಿಸುವುದು. ಭಾರತ ಈ ಬಲೆಗೆ ಈಗಾಗಲೇ ಬಿದ್ದಾಗಿದೆ, ಸಾವಿರಗಟ್ಟಲೆ ಲೀಟರ್ ಪಾಮ್ ಎಣ್ಣೆ ಭಾರತದ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ಪಡೆಯುತ್ತಿವೆ. ಆದರೆ ತುಪ್ಪದಲ್ಲಿ ಘನೀಕೃತ ಲಿನೋಲಿಕ್ ಆಮ್ಲ ಎಂಬ ಒಮೆಗಾ-6 ಕೊಬ್ಬಿನ ತೈಲವಿರುವ ಕಾರಣ ಇದು ಸಾಮಾನ್ಯ ತಾಪಮಾನದಲ್ಲಿ ಗಟ್ಟಿಯಾಗುತ್ತದೆ. ಇದು ಒಂದು ಆರೋಗ್ಯಕರ ಪೋಷಕಾಂಶವಾಗಿದ್ದು ದೇಹದ ತೂಕ ಕಳೆದುಕೊಳ್ಳಲು ನಡೆಯುವ ಯತ್ನಗಳಿಗೆ ಪೂರಕವಾಗಿದೆ. ಪಕ್ಕಾ ದೇಸಿ ತುಪ್ಪ, ಆರೋಗ್ಯದ ಲವಲವಿಕೆಯ ಕೀಲಿಕೈ

ತುಪ್ಪದ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲವಾದ ಕಾರಣದಿಂದಲೇ ಯಾರೋ ತುಪ್ಪ ಆರೋಗ್ಯಕರವಲ್ಲ ಎಂದು ಹೇಳಿದುದನ್ನೇ ನಂಬಿಕೊಂಡು ಇದನ್ನು ವರ್ಜಿಸುತ್ತಿದ್ದೇವೆ. ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳು ಈ ಬಗ್ಗೆ ನಮ್ಮಲ್ಲಿ ಮನೆಮಾಡಿಕೊಂಡಿದ್ದ ತಪ್ಪು ಕಲ್ಪನೆಗಳನ್ನು ನಿವಾರಿಸಬಲ್ಲುದು..

ಎಷ್ಟು ಪ್ರಮಾಣದ ತುಪ್ಪ ಅನಾರೋಗ್ಯಕರ?

ಯಾವುದೇ ಆಹಾರವಾಗಲಿ, ಒಂದು ಮಿತಿ ದಾಟಿದ ಬಳಿಕ ಅನಾರೋಗ್ಯಕರವೇ. ಅತಿಯಾದರೆ ಅಮೃತವೂ ವಿಷ ಎಂಬ ಗಾದೆಯೇ ಇದೆ. ಇದು ತುಪ್ಪವನ್ನೂ ಹೊರತುಪಡಿಸಿಲ್ಲ. ತಜ್ಞರ ಪ್ರಕಾರ ಒಂದು ದಿನಕ್ಕೆ ಎರಡು ಚಿಕ್ಕ ಚಮಚದಷ್ಟು ತುಪ್ಪ ಸೇವಿಸುವುದು ಆರೋಗ್ಯಕರ ಪ್ರಮಾಣವಾಗಿದೆ. ಇದಕ್ಕಿಂತ ಹೆಚ್ಚಿನ ಪ್ರಮಾಣ ಅನಾರೋಗ್ಯಕರವಲ್ಲದಿದ್ದರೂ, ತೂಕ ಕಳೆದುಕೊಳ್ಳಲು ಮಾತ್ರ ಅಸಹಾಯಕಾರಿಯಾಗಿದೆ.

   

ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್ A,D,E ಮತ್ತು K ಸಮೃದ್ಧವಾಗಿವೆ

ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಹಲವು ವಿಟಮಿನ್ನು ಮತ್ತು ಆಂಟಿ ಆಕ್ಸಿಡೆಂಟುಗಳ ಅಗತ್ಯವಿದೆ. ವಿಟಮಿನ್ ಎ ಮತ್ತು ಇ ಉತ್ತಮ ಆಂಟಿ ಆಕ್ಸಿಡೆಂಟುಗಳಾದರೆ ವಿಟಮಿನ್ ಡಿ ಮೂಳೆಗಳನ್ನು ಗಟ್ಟಿಗೊಳಿಸಲು ಹಾಗೂ ಸ್ನಾಯುಗಳು ಬಲಗೊಳ್ಳಲೂ ನೆರವಾಗುತ್ತದೆ. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟಲು ಅಗತ್ಯವಿರುವ ಪೋಷಕಾಂಶವಾಗಿದೆ. ಇವೆಲ್ಲವೂ ತುಪ್ಪದಲ್ಲಿದ್ದು ಒಟ್ಟಾರೆ ಆರೋಗ್ಯ ವೃದ್ಧಿಗೆ ನೆರವಾಗುತ್ತವೆ.

   

ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುತ್ತದೆ

ಉತ್ತರ ಭಾರತದಲ್ಲಿ ಹೃದಯಸಂಬಂಧಿ ಕಾಯಿಲೆಗಳು ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಇದೆ. ಇದರ ಮೂಲ ಕಾರಣವೇನೆಂದರೆ ಉತ್ತರ ಭಾರತದ ಜನರು ಎಣ್ಣೆಗೆ ಬದಲಾಗಿ ಹೆಚ್ಚಾಗಿ ತುಪ್ಪವನ್ನೇ ಸೇವಿಸುತ್ತಾರೆ. ಈ ಅಭ್ಯಾಸದಿಂದ ದೇಹದ ರಕ್ತನಾಳಗಳ ಒಳಗೆ ಸಂಗ್ರಹಗೊಂಡಿದ್ದ ಕೆಟ್ಟಕೊಲೆಸ್ಟ್ರಾಲ್ ( LDL (low-density lipoprotein)) ಸಡಿಲಗೊಂಡು ನಿವಾರಣೆಯಾಗಲು ಸಾಧ್ಯವಾಗುತ್ತದೆ. ಇದು ಹೃದಯದ ಮೇಲಿನ ಹೊರೆಯನ್ನು ತಗ್ಗಿಸಿ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

   

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಊಟದಲ್ಲಿ ಒಂದು ಚಿಕ್ಕ ಚಮಚ ತುಪ್ಪ ಹಾಕಿ ತಿನ್ನುವುದಕ್ಕೆ ನಮ್ಮ ಹಿರಿಯರು ಏಕೆ ಒತ್ತು ನೀಡುತ್ತಿದ್ದರೆಂದು ಗೊತ್ತೇ? ಏಕೆಂದರೆ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಅವರು ಅನುಭವದಿಂದ ಕಂಡುಕೊಂಡಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

   

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇಂದಿನ ಸಂಶೋಧನೆಗಳು ಇವರ ಅನುಭವ ಸರಿ ಎಂದು ಒಪ್ಪಿಕೊಂಡಿವೆ. ಇದರಿಂದ ಸಾಮಾನ್ಯವಾಗಿ ಕಾಡುವ ಆಯಾ ಋತುಮಾನದ ಕಾಯಿಲೆಗಳು ತುಪ್ಪ ತಿನ್ನದವರಿಗೆ ಕಾಡಿದರೆ ತುಪ್ಪ ತಿನ್ನುತ್ತಾ ಬಂದವರು ಆರೋಗ್ಯವಾಗಿರುತ್ತಾರೆ. ನಿತ್ಯವೂ ಚಿಕ್ಕ ಚಮಚ ತುಪ್ಪ ತಿನ್ನುತ್ತಾ ಬಂದರೆ ರೋಗ ನಿರೋಧಕ ಶಕ್ತಿಯ ಜೊತೆಗೇ ಏಕಾಗ್ರತೆ, ಕಲಿಕಾ ಸಾಮರ್ಥ್ಯವೂ ಹೆಚ್ಚುತ್ತದೆ.

   

ವೀರ್ಯದ ಗುಣಮಟ್ಟ ಹೆಚ್ಚಿಸುತ್ತದೆ

ಸಂತಾನಫಲಕ್ಕೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ಒಂದು ಹಂತಕ್ಕೆ ಕಡಿಮೆಯಾಗಕೂಡದು. ವಾಸ್ತವವಾಗಿ ಫಲಕ್ಕಾಗಿ ಒಂದೇ ಅಣು ಸಾಕಾಗಿದ್ದರೂ ಪ್ರತಿ ಮಿಲೀ ನಲ್ಲಿ ನಲವತ್ತು ಮಿಲಿಯನ್ ನಷ್ಟು ಅಣುಗಳಿದ್ದರೆ ಮಾತ್ರ ಸಾಧ್ಯ. ಸೃಷ್ಟಿಯ ಈ ವಿಚಿತ್ರವನ್ನು ಪ್ರಶ್ನಿಸದೇ ಇದಕ್ಕೆ ತಲೆಬಾಗಿ ಈ ಸಂಖ್ಯೆಯನ್ನು ಉತ್ತಮ ಮಟ್ಟದಲ್ಲಿರಿಸಲು ತುಪ್ಪ ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

   

ವೀರ್ಯದ ಗುಣಮಟ್ಟ ಹೆಚ್ಚಿಸುತ್ತದೆ

ಇದರಲ್ಲಿ ಸಮತೋಲನದಲ್ಲಿರುವ ಪ್ರೋಟೀನು ಮತ್ತು ಕೊಬ್ಬು ಪುರುಷರ ಶಕ್ತಿಯನ್ನು ಉತ್ತಮ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಮಾಡಿದ ತುಪ್ಪವನ್ನು 'ಅತ್ಯಂತ ಆರೋಗ್ಯಕರ ಕೊಬ್ಬು' ಎಂಬುದಾಗಿ ವರ್ಣಿಸಲಾಗುತ್ತದೆ.

   

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಅಡುಗೆಗೆ ಬಳಸುವ ಎಣ್ಣೆ ಅಡುಗೆಯನ್ನು ಸುಲಭ ಮತ್ತು ರುಚಿಕರವಾಗಿಸಿದರೂ ಹೊಟ್ಟೆಗೆ ಇದನ್ನು ಅರಗಿಸಿಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಇದಕ್ಕೆ ತದ್ವಿರುದ್ದ ಎಂದರೆ ಮೊಸರು. ಇದು ಅತ್ಯಂತ ಸುಲಭವಾಗಿ ಜೀರ್ಣವಾಗುತ್ತದೆ. ಅಂತೆಯೇ ಉಪ್ಪು ಸಹಾ. ಇದನ್ನು ಅರಗಿಸಿಕೊಂಡು ನಿವಾರಿಸಲು ಬಹಳ ಶ್ರಮಪಡಬೇಕಾಗುತ್ತದೆ. ಆದರೆ ತುಪ್ಪ ಸುಲಭವಾಗಿ ಜೀರ್ಣವಾಗುವ ಕಾರಣ ಇದರಲ್ಲಿರುವ ಪೋಷಕಾಂಶಗಳು ಹೆಚ್ಚಿನ ಶ್ರಮವಿಲ್ಲದೇ ಜೀರ್ಣಾಂಗಗಳ ಮೂಲಕ ರಕ್ತ ಸೇರಿ ಅಗತ್ಯವಾದ ಅಂಗಗಳಿಗೆ ದೊರಕುತ್ತವೆ. ಆದ್ದರಿಂದ ಇದರಲ್ಲಿರುವ ಕೊಬ್ಬು ಸಂಗ್ರಹಗೊಳ್ಳುವುದು ಅತಿ ನಿಧಾನ ಹಾಗೂ ತುಪ್ಪದ ಪ್ರಮಾಣ ಹೆಚ್ಚಿದ್ದಾಗ ಮಾತ್ರ.

   

ಹೃದಯದ ತೊಂದರೆ ಇರುವವರಿಗೆ ತಜ್ಞರು ನೀಡುವ ಎಚ್ಚರಿಕೆ

ಹೃದಯ ಸಂಬಂಧಿ ತೊಂದರೆ ಇರುವವರು ಮತ್ತು ಸ್ಥೂಲದೇಹಿಗಳು ತುಪ್ಪವನ್ನು ಸೇವಿಸುವ ಮುನ್ನ ತಜ್ಞವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಉತ್ತಮ. ಏಕೆಂದರೆ ಇವರು ಈಗಾಗಲೇ ಪಡೆಯುತ್ತಿರುವ

   

ಚಿಕಿತ್ಸೆ ಮತ್ತು ಔಷಧಿಗಳಿಗೆ ತುಪ್ಪ ವ್ಯತಿರಿಕ್ತ ಪರಿಣಾಮ ಬೀರಬಲ್ಲುದು

ಉಳಿದಂತೆ ಆರೋಗ್ಯವಂತರು ನಿಗದಿತ ಪ್ರಮಾಣದಲ್ಲಿ ತುಪ್ಪ ಸೇವಿಸಬಹುದು. ಸ್ಥೂಲಕಾಯ ಆವರಿಸಿಕೊಂಡಿದ್ದು ತೂಕ ಕಳೆದುಕೊಳ್ಳಲಿಚ್ಛಿಸುವವರು ತಮ್ಮ ನಿತ್ಯದ ಆಹಾರಗಳಲ್ಲಿ ಎಣ್ಣೆಯ ಬದಲಿಗೆ ತುಪ್ಪವನ್ನು ಬಳಸಿದಷ್ಟೂ ತೂಕ ಕಳೆದುಕೊಳ್ಳುವ ಪ್ರಯತ್ನಗಳಿಗೆ ಹೆಚ್ಚು ಫಲ ಸಿಗುತ್ತದೆ.