Tuesday 8 August 2017

Future energy vision india conference 2017

ನಮ್ಮ ಭಾರತ ಪ್ರಪಂಚದಲ್ಲಿ ಜನಸಂಖ್ಯೆ ಯಲ್ಲಿ ಮೊದಲು ಸ್ಥಾನಕ್ಕೆ ಸೇರಲು ಹತ್ತಿರದಲ್ಲಿದೆ ಅದಕ್ಕಾಗಿಯೇ ಈ  ಶಕ್ತಿ ಸಂಶೋಧನಾ ಕೇಂದ್ರ
    ಅತಿಕಡಿಮೆ ವೆಚ್ಚದಲ್ಲಿ , ಮತ್ತು ಪ್ರದೇಶದಲ್ಲಿ ಇಂಧನವನ್ನು ಪ್ರಧಾನಮಂತ್ರಿ ಗಳು ಅನುಮತಿ ನೀಡಿದರೆ ತಯಾರಿಸಲು ನಾವು ಮುಂದಾಗಿದ್ದೀವೆಂದು ಕ್ಷಿಪಣಿ ತಜ್ಞ ರಾದ ಪ್ರಹ್ಲಾದ ರಾವ್ ತಿಳಿಸಿದರು.
   ಮರಳಿ ನಿಂದ ತೆಗೆಯಲ್ಪಡುವ ಒಂದು ತೊರಿಯಂ ಎಂಬ ಖನಿಜ ನಿಂದ ವಿದ್ಯುತ್ ಶಕ್ತಿ ಯನ್ನು ತಯಾರಿಸಲು ಭಾರತ ಮುಂದಾಗಿದೆ , ಸಮುದ್ರಗಳ ಹತ್ತಿರದಲ್ಲಿ ಈ ಕೇಂದ್ರ ಮಾಡಲು ಅನುಕೂಲವೆಂದು ರಾವ್ ಅವರು ತಿಳಿಸಿದರು , ಈ ಕೇಂದ್ರ ಆಗಲೇ ಅಮೆರಿಕ ಸಂಯುಕ್ತ ರಾಷ್ಟ್ರ ದ ಓಕಿರೇಜ್ ನಲ್ಲಿ ಸ್ಥಾಪಿಸಿದ್ದು ಆಕೇಂದ್ರ ನಿರಾತಂಕವಾಗಿ ನಡೆತಿದ್ದು ೨.೫೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತಿದೆ ಎಂದರು , ಮತ್ತೆ ಇಂಡೊನೇಷ್ಯ ಸಿಂಗಪುರ್ ನಲ್ಲು ಈ ಕೇಂದ್ರ ಹತ್ತಿರದಲ್ಲೇ ಪ್ರಾರಂಭವಾಗುತ್ತದೆ ಎಂದರು.
    ಶಕ್ತಿ ಸಂಶೋಧನಾ ಕೇಂದ್ರ ವು FEVI-Con2017 ಎಂಬ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಗಸ್ಟ್ ೮,೯ ರಂದು ಸ್ವಾಮಿ ವಿವೇಕಾನಂದ ಯೊಗಾ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯ ಜಿಗಣಿಯ ಕ್ಯಾಂಪಸ್ ನಲ್ಲಿ ಆಯೊಜಿಸಲಾಗಿದೆ ಎಂದು , ಅಲ್ಪ ಶಕ್ತಿ ಅಣು ಕಿರಣ ಕ್ರಿಯೆಗಳು , ಹಸಿರು ಶಕ್ತಿ ಸಂಪನ್ಮೂಲ ಅಭಿವೃದ್ಧಿ ,
ಡಾ.ಪ್ರಹ್ಲಾದ ರಾಂರಾವ್ ಇಂದು ತಿಳಿಸಿದರು.
   ಈ ಸಮ್ಮೇಳನಕ್ಕೆ ತಜ್ಞ ರಾದ
ಜಪಾನ್ ನ ಅಕಿಯಾ ಅರೊ ಮೊಟೊ , ಬೆಲ್ಜಿಯಂ ನಿಂದ ಡಾ. ಹಮೀದ್ , ಅಮೆರಿಕದ ಡಾ.ಸ್ಟೀವ್ ರುಮೇಲ್ , ಯೂರೋಪ್, ನೇಪಾಳ ತಜ್ಞರು ಮತ್ತು ಖ್ಯಾತ ವಿಜ್ಞಾನಿ ಬಿಎಆರ್ ಸಿ ಮಾಜಿ ನಿರ್ದೇಶಕ ಕುಮಾರ್ ಬೆನರ್ಜಿ, ಡಿಎಸ್ ಟಿ ಮಾಜಿ ನಿರ್ದೇಶಕ ಡಾ.ವಿ.ಎಸ್.ಮೂರ್ತಿ , ಭಾರತೀಯ ತತ್ತ್ವಜ್ಞಾನಿಗಳಾದ ಇಂದ್ರನೀಲ್ ಮುನ್ನಾ , ಡಾ.ಅಜಿತ್ ಕುಮಾರ್ ಆಯುರ್ವೇದಿ ಮುಂತಾದ ಪ್ರಮುಖರು ಹಾಜರಾಗಿದ್ದರು ಡಾ.ರಾವ್ ತಿಳಿಸಿದರು.
    ಈ ಕಾರ್ಯಕ್ರಮ ನಗರದ ಸ್ವಾಮಿ ವಿವೇಕಾನಂದ ಯೊಗಾ ಅನುಸಂಧಾನ ಸಮಿತಿ , ಜಿಗಣಿ ಯಲ್ಲಿ ನಿರ್ವಹಿಸಲಾಗುತಿದ್ದು ಇದಕ್ಕೆ ಸಂಭವಿಸಿದ ದಾಖಲೆಗಳನ್ನು ಪ್ರಧಾನ ಮಂತ್ರಿಗಳಿಗೆ ವಿವರಿಸಿ ನಮ್ಮ ದೇಶದಲ್ಲು ಇಂತಾ ಶಕ್ತಿ ಕೇಂದ್ರ ವನ್ನು ನಿರ್ಮಾಣ ಮಾಡಲು ಸಮಾವೇಶದ ಉದ್ದೇಶ ವಾಗಿದೆ

No comments:

Post a Comment