Friday 20 October 2017

ಲಕ್ಷ್ಮಿಯನ್ನು...ಮನೆಗೆ ಕರೆಯಲು...ಈ ಜಪ ಮಾಡಿ.

ಸತಿ- ಅಗ್ನಿಯಲ್ಲಿ ಸುಟ್ಟು ಹೋದರೂ ಜೀವಂತವಾಗಿ ಇರುವವಳು.
ಸಾಧ್ವಿ- ಆಶಾವಾದಿ.
ಭವ ಪ್ರೀತಾ- ಭಗವಂತನಾದ ಶಿವನನ್ನು ಪ್ರೀತಿಸುವವಳು.
ಭವಾನಿ- ಬ್ರಹ್ಮಾಂಡದಲ್ಲಿ ನಿವಾಸ ಮಾಡುವವಳು.
ಭವ ಮೋಚಿನಿ- ಸಂಸಾರ ಬಂಧನಗಳಿಂದ ಮುಕ್ತಿ ಮಾಡುವವಳು.
ಆರ್ಯ -ಅಂದರೆ ದೇವಿ .
ದುರ್ಗಾ- ಆಪ ರಾಜ್ಯ.
ಜಯಾ- ವಿಜಯೇ.
ಆದ್ಯ -ಶುರುವಾಗುವ ವಾಸ್ತವಿಕತೆ ಹೊಂದಿರುವವಳು.
ತ್ರಿನೇತ್ರಿ- ಮೂರು ಕಣ್ಣುಗಳನ್ನು ಹೊಂದಿರುವವಳು.
ಶೂಲ ಧಾರಿಣಿ- ಶೂಲವನ್ನು ಕೈಯಲ್ಲಿ ಹಿಡಿದಿರುವವಳು.
ಪಿನಾಕಿನಿ- ಶಿವನ ತ್ರಿಶೂಲವನ್ನು ಹಿಡಿದಿರುವವಳು.
ಚಿತ್ರ -ಸುಂದರಿ ಮತ್ತು ಸುರದ್ರೂಪಿ .
ಚಂದ್ರಘಂಟಾ – ಪ್ರಚಂಡವಾದ ಸ್ವರದಿಂದ ಗಂಟೆಯಿಂದ ನಾದ ಮಾಡುವವಳು.
ಮಹೋದರಿ -ಬ್ರಹ್ಮಾಂಡವನ್ನು ತನ್ನ ಹಿಡಿತದಲ್ಲಿ ಇಟ್ಟು ಕೊoಡಿರುವವಳು.
ಮಹಾತಪ- ಮಹಾನ್ ತಪಸ್ಸನ್ನು ಮಾಡುವವಳು.
ಮನ- ಮನಸ್ಸು,ಸರ್ವಶಕ್ತಿ, ಅಹಂಕಾರ, ಸರ್ವ ಜ್ಞಾನವನ್ನು ,ಅಭಿಮಾನವನ್ನು ಹೊಂದಿರುವವಳು.
ಚಿತ್ರರೂಪ- ಚಿಂತೆಯನ್ನು ಮಾಡುತ್ತಿರುವವಳು.
ಚಿತಾ- ಮೃತ್ಯುರೂಪಿ.
ಚಿತಿ- ಚೈತ್ಯೇ.
ಸರ್ವ ಮಂತ್ರಮಯಿ – ಎಲ್ಲಾ ಮಂತ್ರಗಳ ಜ್ಞಾನವನ್ನು ಹೊಂದಿರುವವಳು .
ಸಭಾ ಸಮರ್ಥೆ -ಎಲ್ಲರಿಗಿಂತ ಅತಿ ಎತ್ತರದಲ್ಲಿ ಇರುವವಳು.
ಸತ್ಯಾನಂದ -ಸರ್ವ ರೂಪಿಣಿ.
ಅನಂತ- ಇವಳಿಗೆ ಅಂತ್ಯವೇ ಇಲ್ಲ .
ಭವಾನಿ -ಎಲ್ಲ ಭಾವವನ್ನು ಹೊಂದಿರುವವಳು.
ಭವ್ಯ- ಭಾವನೆ ಮತ್ತು ಧ್ಯಾನವನ್ನು ಮಾಡುವವಳು.
ಅಭವ್ಯ- ಎಲ್ಲರಿಗಿಂತಲೂ ಮೇಲೆ ಇರುವವಳು.
ಸದಾ ಗತಿ -ಒಳ್ಳೆಯದನ್ನೇ ಮಾಡುವವಳು.
ಮೋಕ್ಷ ದಾನ -ಮೋಕ್ಷವನ್ನು ಪ್ರದಾನ ಮಾಡುವವಳು.
ಶಾಂಭವಿ -ಶಿವಪ್ರಿಯ ಶಿವನನ್ನು ಪ್ರೀತಿಸುವವಳು.
ಚಿಂತೆ- ಚಿಂತೆಯನ್ನು ಮಾಡುವವಳು. ರತನ ಪ್ರಿಯಾ -ಹಣವನ್ನು ಪ್ರೀತಿಸುವವಳು. ಸರ್ವ ವಿದ್ಯಾ- ಎಲ್ಲ ವಿದ್ಯೆಯ ಜ್ಞಾನವನ್ನು ಹೊಂದಿರುವವಳು.
ದಕ್ಷ ಕನ್ಯಾ- ದಕ್ಷನ ಮಗಳು.
ದಕ್ಷಯಜ್ಞ ವಿನಾಶಿನಿ -ದಕ್ಷನ ಯಜ್ಞವನ್ನು ನಾಶ ಮಾಡಿದವಳು.
ಅಪರ್ಣಾ- ತಪಸ್ಸನ್ನು ಮಾಡುವ ಸಮಯದಲ್ಲಿ ಪಥ್ಯವನ್ನು ಸಹ ಸೇವಿಸದಿರುವವಳು.
ಅನೇಕ ವರ್ಣ- ಹಲವು ಬಣ್ಣಗಳಿಂದ ಕೂಡಿರುವವಳು.
ಪಟಾಲ- ಕೆಂಪು ಬಣ್ಣ ಹೊಂದಿರುವವಳು.
ಪಾಟಾಲ- ಕೆಂಪು ಗುಲಾಬಿ ಅಥವಾ ಕೆಂಪು ಬಣ್ಣದ ಹೂವನ್ನು ಮುಡಿದಿರುವವಳು.
ಪಟ್ಟಾಂಬಿ ಪರಿದಾ – ರೇಷ್ಮೆ ವಸ್ತ್ರವನ್ನು ಧರಿಸುವವಳು.
ಕಾಲ ಮಂಜಿ, ರಾರಾ ರಂಜನಿ- ಗೆಜ್ಜೆಯನ್ನು ಧರಿಸಿ ಪ್ರಸನ್ನ ವಾಗಿರುವವಳು.
ಅಮೇವ- ಸೀಮೆಯ ಎಲ್ಲೆಯೇ ಇಲ್ಲದಿರುವವಳು.
ವಿಕ್ರಮ-ಅತ್ಯಂತ ಪರಾಕ್ರಮಿ ಯಾಗಿರುವವಳು.
ಕರೂರ- ದೈತ್ಯರಿಗೆ ಕಠೋರ ರೂಪವನ್ನು ತೋರಿಸುವವಳು.
ಸುಂದರಿ- ಸುಂದರ ರೂಪವನ್ನು ಹೊಂದಿರುವವಳು.
ಸುರಸುಂದರಿ- ಅತ್ಯಂತ ಸುಂದರಿಯಾಗಿರುವವಳು.
ವನದುರ್ಗೆ- ಕಾಡಿನಲ್ಲಿ ವಾಸಿಸುವ ದುರ್ಗಿ. ಮಾತಂಗಿ- ಮಾತಂಗ ಋಷಿಮುನಿಗಳಿಂದ ಪೂಜಿಸಿದವಳು.
ಬ್ರಾಹ್ಮಿ- ಭಗವಂತನಾದ ಬ್ರಹ್ಮನ ಶಕ್ತಿ. ಮಹೇಶ್ವರಿ -ಪ್ರಭು ಶಿವನ ಶಕ್ತಿ.
ಇಂದ್ರಿ -ಸ್ವರ್ಗಲೋಕದ ಇಂದ್ರನ ಶಕ್ತಿ. ಕೌಮಾರಿ- ಕನ್ಯೆಯಾಗಿರುವವಳು.
ವೈಷ್ಣವಿ -ಅಜೇಯವಾಗಿರುವವಳು. ಚಾಮುಂಡಿ – ಚಂಡ ಮುಂಡ ರಾಕ್ಷಸರನ್ನು ಸಂಹಾರ ಮಾಡಿದವಳು.
ವರಾಹಿ- ವರಾಹ ಪ್ರಾಣಿಯ ಮೇಲೆ ಸವಾರಿ ಮಾಡುವವಳು.
ಲಕ್ಷ್ಮೀ- ಸೌಭಾಗ್ಯ ದೇವಿ, ದನವನ್ನು, ಸಿರಿ ಸಂಪತ್ತನ್ನು ಕರುಣಿಸುವವಳು. ಪುರುಷಾಕೃತಿ- ಪುರುಷನ ರೂಪವನ್ನು ಧಾರಣೆ ಮಾಡುವವಳು.
ವಿಮಾ ಲೋಕ ಕಾರಿಣಿ- ಆನಂದವನ್ನು ಕೊಡುವವಳು .
ಜ್ಞಾನ- ಜ್ಞಾನದಿಂದಲೇ ತುಂಬಿ ಹೋಗಿರುವವಳು.
ಕ್ರಿಯೆ- ಎಲ್ಲ ಕೆಲಸವನ್ನು ನಡೆಸಿಕೊಡುವವಳು.
ನಿತ್ಯ -ಅನಂತವಾಗಿರುವವಳು.
ಬುದ್ಧಿ- ಬುದ್ಧಿ ನೀಡುವವಳು ಜ್ಞಾನ ನೀಡುವವಳು.
ಬಹುಳ ಪ್ರೇಮಿ- ಎಲ್ಲರನ್ನೂ ಪ್ರೀತಿಸುವವಳು.
ಸರ್ವ ವಾಹ ವಾಹನ -ಎಲ್ಲ ವಾಹನವನ್ನು ಹೊಂದಿರುವವಳು.
ಬಹುಳ – ವಿಭಿನ್ನ ರೂಪಗಳನ್ನು ಹೊಂದಿರುವವಳು.
ಬಹುಳ ಪ್ರೇಮಿ- ಎಲ್ಲರನ್ನೂ ಪ್ರೀತಿಸುವವಳು.
ಮಹಿಷಾಸುರ ಮರ್ದಿನಿ- ಮಹಿಷಾಸುರನನ್ನು ಸಂಹಾರ ಮಾಡಿದವಳು .
ಮಧು ಕೈಟಭ ಮರ್ದಿನಿ – ಮಧು ಕೈಟಭ ರಾಕ್ಷಸರನ್ನು ನಾಶ ಮಾಡಿದವಳು.
ಚoಡ ಮುಂಡ ವಿನಾಶಿನಿ- ಚಂಡ ಮುಂಡ ರಾಕ್ಷಸರನ್ನು ನಾಶ ಮಾಡಿದವಳು.
ಸರ್ವ ಅಸುರ ವಿನಾಶಿನಿ-ಎಲ್ಲಾ ರಾಕ್ಷಸರನ್ನು ನಾಶ ಮಾಡಿದವವಳು.
ಶುಂಭ ನಿಶುಂಭ ಮರ್ದಿನಿ -ಶುಂಭ ನಿಶುಂಭ ರಾಕ್ಷಸರನ್ನು ಸಂಹಾರ ಮಾಡಿದವಳು. ಮಹೋದರಿ- ಬ್ರಹ್ಮಾಂಡವನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವವಳು.
ಸರ್ವದಾನ ವಿಪಾತಿನಿ – ಸಂಹಾರಕ್ಕೆ ಶಕ್ತಿಯನ್ನು ಇಟ್ಟುಕೊಂಡಿರುವವಳು.
ಸರ್ವ ಶಾಸ್ತ್ರಮಯಿ- ಎಲ್ಲಾ ಶಾಸ್ತ್ರಗಳಲ್ಲಿಯೂ ನಿಪುಣತೆಯನ್ನು ಹೊಂದಿರುವವಳು. ಸತ್ಯ -ಸತ್ಯವನ್ನೇ ನುಡಿಯುವವನಳು.
ಸರ್ವ ವಸ್ತ್ರ ಧಾರಿಣಿ- ಎಲ್ಲಾ ವಸತ್ರವನ್ನು ರೂಪವನ್ನು ಧರಿಸುವವಳು.
ಅನೇಕ ಶಸ್ತ್ರ ಹಸ್ತ- ಅನೇಕ ಕೈಗಳನ್ನು ಹಸ್ತಗಳನ್ನು ಹೊಂದಿರುವವಳು.
ಕುಮಾರಿ – ಸುಂದರ ಕಿಶೋರಿ .
ಕನ್ಯಾ -ಕನ್ಯೆ ಆಗಿರುವವಳು.
ಒಂದು ಕನ್ಯಾ -ಜವಾನ ಕನ್ಯಾ ಆಗಿರುವವಳು.
ಅನೇಕ ಹಸ್ತ ಧಾರಿಣಿ – ಅನೇಕ ಹಸ್ತಗಳನ್ನು ಹೊಂದಿರುವವಳು ಜತೆಗೆ ಶಸ್ತ್ರವನ್ನು ಹಿಡಿದಿರುವವಳು.
ಯುಕ್ತಿ- ನಾರಿ .
ಅಪ್ರೌಢ – ಎಂದಿಗೂ ಪುರಾಣವಲ್ಲದ.
ಪ್ರೌಢ- ಹಳೆಯದು ಅಥವಾ ಪುರಾಣ ಕಾಲದ್ದು.
ವೃದ್ಧ ಮಾತಾ- ಶಿಥಿಲವಾಗಿರುವುದು.
ಬಲಪ್ರದಾ- ಶಕ್ತಿಯನ್ನು ಕೊಡುವವಳು.
ಯತಿ- ತಪಸ್ಸನ್ನು ಮಾಡುತ್ತಿರುವವಳು.
ಮುಕ್ತ ಕೋಶಿ -ಕೂದಲನ್ನು ಕೆದರಿಕೊಂಡು ಇರುವವಳು.
ಘೋರ ರೂಪ- ಭಯಂಕರ ದೃಷ್ಟಿಯನ್ನು ಹೊಂದಿರುವವಳು.
ಮಹಾಬಲ- ಅಪಾರ ಶಕ್ತಿಯನ್ನು ಹೊಂದಿರುವವಳು.
ಅಗ್ನಿ ಜ್ವಾಲಾ- ಅಗ್ನಿಯ ರೀತಿಯ ಜ್ವಾಲೆಯನ್ನು ಹೊಂದಿರುವವಳು.
ರೌದ್ರ ಮುಖಿ- ವಿಧ್ವಂಸಕ ರುದ್ರಾಣಿ ಭಯಂಕರ ಮುಖವನ್ನು ಹೊಂದಿರುವ ಹೊಂದಿರುವವಳು.
ಕಾಳರಾತ್ರಿ- ಕಪ್ಪು ಬಣ್ಣದಿಂದ ಕೂಡಿರುವವಳು.
ತಪಸ್ವಿನಿ- ತಪಸ್ಸನ್ನು ಮಾಡುತ್ತಿರುವವಳು.
ನಾರಾಯಣಿ- ಭಗವಂತನಾದ ನಾರಾಯಣನ ಭಯಂಕರ ರೂಪ.
ಭದ್ರಕಾಳಿ- ಕಾಳಿ ಮಾತೆಯ ಭಯಂಕರ ರೂಪ.
ವಿಷ್ಣು ಮಾಯ- ಭಗವಂತನಾದ ವಿಷ್ಣುವಿನ ಮಾಯೆ.
ಜಲ ದೋತಿ- ಬ್ರಹ್ಮಾಂಡದಲ್ಲಿ ನಿವಾಸ ಮಾಡುವವಳು.
ಶಿವ ದೂತ- ಶಿವನ ದೂತಳು.
ಅನಂತ- ವಿನಾಶ ರಹಿತಳು.
ಪರಮೇಶ್ವರಿ -ಪ್ರಥಮ ದೇವಿ.
ಕಾತ್ಯಾಯಿನಿ – ಕಾತ್ಯಾಯನಿ ಋಷಿಗಳು ಪೂಜೆ ಮಾಡಿದವಳು.
ಸಾವಿತ್ರಿ- ಸೂರ್ಯನ ಪುತ್ರಿ.
ಬ್ರಹ್ಮ ವಾಹಿನಿ- ಬ್ರಹ್ಮಾಂಡದಲ್ಲಿ ವಾಸ ಮಾಡುವವಳು.
ಕಾಳಿ- ಹಿಂಸೆ ನೀಡುವವಳು.
ಪ್ರತ್ಯಕ್ಷ- ವಾಸ್ತವಿಕ..

Sunday 15 October 2017

ಯುಎಸ್‌ಐಎಫ್‌ ಮತ್ತು ದಿ ‍ಛೋಪ್ರಾಸ್‌ ಸಹಭಾಗಿತ್ವ

USIF and The Chopras Collaborate For A Bright Business Future

ಅಕ್ಟೋಬರ್ 14, 2017: ಯುಎಸ್‌ ಇಮಿಗ್ರೇಶನ್‌ ಫಂಡ್‌ನೊಂದಿಗೆ ದಿ ಛೋಪ್ರಾಸ್‌ ಸಹಭಾಗಿತ್ವ ಸಾಧಿಸಿದ್ದು, ಅಮೆರಿಕದಲ್ಲಿ ವಹಿವಾಟು, ಶಿಕ್ಷಣ, ವೃತ್ತಿ ಮತ್ತು ನಿವಾಸ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಇಂದು ಇಬಿ-5 ವೀಸಾ ಪ್ರೋಸೆಸ್‌ಅನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ.
ಇಬಿ-5 ವೀಸಾ ಕಾರ್ಯಕ್ರಮದ ಅಡಿಯಲ್ಲಿ ಅರ್ಹ ಪ್ರಾಜೆಕ್ಟ್‌ಗಳಲ್ಲಿ 500,000 ಅಥವಾ 1,00,000 ಡಾಲರ್ ಹೂಡಿಕೆ ಮಾಡುವ ಅವಕಾಶ ನೀಡಲಾಗುತ್ತದೆ. ಈ ಯೋಜನೆಯು ಕನಿಷ್ಠ 10 ಪೂರ್ಣಾವಧಿ ಉದ್ಯೋಗವನ್ನು ಅಮೆರಿಕದ ಕೆಲಸಗಾರರಿಗೆ ಒದಗಿಸಬೇಕಾಗುತ್ತದೆ. ಈ ಆಧಾರದಲ್ಲಿ ವ್ಯಕ್ತಿಗಳಿಗೆ ಮತ್ತು ಅವರ ಕುಟುಂಬದವರಿಗೆ ಶಾಶ್ವತ ಗ್ರೀನ್ ಕಾರ್ಡ್‌ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಯುಎಸ್‌ ಇಮಿಗ್ರೇಶನ್ ಫಂಡ್‌ನ ಏಷ್ಯಾ ಪೆಸಿಫಿಕ್ ಆಪರೇಶನ್ಸ್‌ನ ನಿರ್ದೇಶಕ ಜಾನ್‌ ಲಿನ್ “ಭಾರತದ ಆರ್ಥಿಕತೆ ಬೆಳೆಯುತ್ತಿರುವುದರಿಂದ, ಭಾರತ ಮತ್ತು ಅಮೆರಿಕದ ಮಧ್ಯೆ ಸಾಕಷ್ಟು ಆರ್ಥಿಕ ವಿನಿಮಯ ನಡೆಯುವ ಅವಕಾಶವಿದೆ. ಇಂತಹ ಸೆಮಿನಾರ್‌ಗಳು ಸಾಂಸ್ಕೃತಿಕ ಮತ್ತು ಉದ್ಯೋಗ ಅವಕಾಶಗಳಿಗೆ ಉತ್ತಮ ವೇದಿಕೆಯಾಗಿರಲಿದೆ” ಎಂದರು.
ಈ ಯುಎಸ್‌ ವೀಸಾ ಕಾರ್ಯಕ್ರಮದ ಅನುಕೂಲಗಳ ಬಗ್ಗೆ ಯುಎಸ್‌ ಇಮಿಗ್ರೇಶನ್ ಫಂಡ್‌ನ ತಂಡ, ಇಬಿ-5 ಪರಿಣಿತರು ಮತ್ತು ಸಿಬ್ಬಂದಿಯು ಅರಿವು ಮೂಡಿಸಿತು.  ಈ ಕಾರ್ಯಕ್ರಮವನ್ನು 1990ರಲ್ಲಿ ರೂಪಿಸಲಾಗಿದ್ದು, ಅಮೆರಿಕದ ವಹಿವಾಟಿನಲ್ಲಿ ಹೂಡಿಕೆ ಮಾಡಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿತ್ತು. ಈ ಕಾರ್ಯಕ್ರಮವನ್ನು ಚಂಡೀಗಢ, ಲುಧಿಯಾನ, ದೆಹಲಿ, ಮುಂಬೈ ನಂತರದಲ್ಲಿ ಈಗ ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಕಾರ್ಯಕ್ರಮದ ವಿವರಗಳು ದಿ ಚೋಪ್ರಾಸ್ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. The Chopras.
ಯುಎಸ್‌ ಇಮಿಗ್ರೇಶನ್‌ ಫಂಡ್ (ಯುಎಸ್‌ಐಎಫ್‌): ಯುಎಸ್‌ ಇಮಿಗ್ರೇಶನ್‌ ಫಂಡ್ ಎಂಬುದು ಅಮೆರಿಕದ ಪ್ರಮುಖ ಇಬಿ-5 ಪ್ರಾದೇಶಿಕ ಕೇಂದ್ರದ ಕಾರ್ಯಕ್ರಮವಾಗಿದ್ದು, ಅಮೆರಿಕಕ್ಕೆ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶ ಹೊಂದಿದೆ. ವಿಶ್ವದ ವಿವಿಧ ಮಾರುಕಟ್ಟೆಗಳಲ್ಲಿ ಅನುಮೋದಿತ ಪ್ರಾದೇಶಿಕ ಕೇಂದ್ರಗಳ ಮೂಲಕ ಅಮೆರಿಕವು ಉದ್ಯಮಿಗಳಿಗೆ ಹೂಡಿಕೆ ಅವಕಾಶವನ್ನು ಒದಗಿಸುತ್ತದೆ.
ದಿ ಚೋಪ್ರಾಸ್‌ ಬಗ್ಗೆ: ದಿ ಚೋಪ್ರಾಸ್‌ ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಜಾಗತಿಕ ಶಿಕ್ಷಣ ಕಾರ್ಪೊರೇಟ್ ಎಂದು ಹೆಸರಾಗಿದೆ. ವಿದೇಶದಲ್ಲಿ ಅಧ್ಯಯನ ನಡೆಸುವವರಿಗೆ ಇದು ಉನ್ನತ ಗುಣಮಟ್ಟದ ಶಿಕ್ಷಣ ಕನ್ಸಲ್ಟನ್ಸಿಯನ್ನು ಒದಗಿಸುತ್ತಿದೆ. 1995ರಿಂದಲೂ ಚಾಲ್ತಿಯಲ್ಲಿರುವ ಇದು 350,000 ವಿದ್ಯಾರ್ಥಿಗಳು ಮತ್ತು  ಕುಟುಂಬಗಳಿಗೆ ಸೇವೆ ಒದಗಿಸುತ್ತಿದೆ. 40 ದೇಶಗಳು, 4 ಖಂಡಗಳು ಮತ್ತು 600ಕ್ಕೂ ಹೆಚ್ಚು ಪಾಲುದಾರಿಕೆಯನ್ನು ಇದು ಹೊಂದಿದೆ.

Wednesday 11 October 2017

ಇಂಥ ಸೀರಿಯಲ್ ಗಳು ನಮಗೆ ಬೇಕಾ?

*ಅಬ್ಬಾಬ್ಬಾ!! ಎಂತೆಥಾ ಧಾರವಾಹಿಗಳು...!!*
   ಒಬ್ಬರಿಗಿಂತ ಒಬ್ಬರಿಗೆ ಮನೆಹಾಳು ಮಾಡವುದರಲ್ಲಿ ಸೂಪರ್ ಐಡಿಯಾಗಳು..

😕 *ನಿಮ್ಮ ಮಗನ ಸಂಸಾರ ಹಾಳು* ಮಾಡಬೇಕಾದಲ್ಲಿ ಕಲರ್ಸ್ ಕನ್ನಡದಲ್ಲಿ *"ಯಶೋಧೆ"* ಧಾರವಾಹಿ ನೋಡಿ..

😉 *ನಿಮ್ಮ ಅಕ್ಕ- ತಂಗಿಯ ಸಂಸಾರ ಹಾಳು* ಮಾಡಬೇಕಾದಲ್ಲಿ ಕಲರ್ಸ್ ಕನ್ನಡದಲ್ಲಿ *" ಅಕ್ಕ "* ಧಾರವಾಹಿ ನೋಡಿ..

😔 *ನಿಮ್ಮ ದತ್ತು ಮಗಳ ಸಂಸಾರ* ಹಾಳು ಮಾಡಬೇಕಾದಲ್ಲಿ ಸುವರ್ಣದಲ್ಲಿ *" ಅಮೃತವರ್ಷಿಣಿ "* ಧಾರವಾಹಿ ನೋಡಿ..

😬 *ನಿಮ್ಮ ಸೊಸೆಯನ್ನು ಮನೆ ಬಿಟ್ಟು* ಓಡಿಸಬೇಕಾದಲ್ಲಿ ಜೀ ಕನ್ನಡದಲ್ಲಿ *" ಮಿ.ರಂಗೇಗೌಡ "* ಧಾರವಾಹಿ ನೋಡಿ.

😘 *ನಿಮ್ಮ ಸ್ನೇಹಿತನ ಸಂಸಾರ* ಹಾಳು ಮಾಡಬೇಕಾದಲ್ಲಿ ಸುವರ್ಣದಲ್ಲಿ *" ಅವನು ಅತ್ತೆ ಶ್ರಾವಣಿ "* ಧಾರವಾಹಿ ನೋಡಿ..

😫 *ನೀವು ಯಾರದಾದರೂ ಜೀವ ತೆಗೆಯ ಬೇಕಾ*ದಲ್ಲಿ ಕಲರ್ಸ್ ಕನ್ನಡದಲ್ಲಿ *" ಲಕ್ಷ್ಮೀಬಾರಮ್ಮ "* ಧಾರವಾಹಿ ನೋಡಿ..

😱 *ನೀವು ಬಾಲ್ಯದಲ್ಲೊಂದು, 25ನೇ ವರ್ಷದಲ್ಲಿ ಇನ್ನೊಮ್ಮೆ ಮದುವೆಯಾಗ*ಬೇಕೆಂದರೆ ಕಲರ್ಸ್ ಕನ್ನಡದಲ್ಲಿ *" ಪುಟ್ಟಗೌರಿ ಮದುವೆ"* ಧಾರವಾಹಿ ನೋಡಿ..
.
ಮನೆಹಾಳು ಈ ಎಲ್ಲ ಧಾರಾವಾಹಿಗಳು.. *ಹೆಂಗಸರೇ ಧಾರಾವಾಹಿ ನೋಡಿ ಮಕ್ಕಳ ಭವಿಷ್ಯ ಹಾಳುಗೆಡವದಿರಿ👏�👏�*

Tuesday 10 October 2017

ಡ್ರೈವ್ರ್ಸ್ ಗಳ...ಕುಂದು ಕೊರತೆಗಳು

ಕರ್ನಾಟಕ ಡ್ರೈವ್ರ್ಸ್ ಅಂಡ್ owners  ಅಸ್ಸೋಸಿಯೇಷನ್.. ಸಂಸ್ಥಾಪಕರಾದ...ಶ್ರೀ ಮಂಜುನಾಥ ರವರೊಂದಿಗೆ ಕೂತು...ಡ್ರೈವ್ರ್ಸ್  ಮತ್ತು ಒನರ್ಸ್ ಗಳ.. ಕುಂದು ಕೊರತೆಗಳು ಹಾಗೂ ಅವರ ಹಣಕಾಸಿನ ತೊಂದರೆಗಳ ಬಗ್ಗೆ ವಿಮರ್ಶೆ ಮಾಡಲಾಯಿತು.  ಮುಂದೆ ತೆಗೆದುಕೊಳ್ಳಬೇಕಾದ ತೀರ್ಮಾನ ಗಳನ್ನು ಕೂಲಂಕುಷವಾಗಿ.. ಚರ್ಚಿಸಲಾಯಿತು..  ಹಾಗೂ ರಕ್ತ ದಾನ ದ  ಬಗ್ಗೆಯೂ ಅವರು ನಮ್ಮೊಡನೆ ಮುಂದಿನ ಕಾರ್ಯಕ್ರಮಗಳನ್ನು ಹಂಚಿ ಕೊಂಡರು. ಹೀಗಾಗಿ....ನಿಮಗೇನಾದ್ರು (DRIVER AND OWNERS) ತೊಂದರೆಗಳಿದ್ದರೆ ನಮಗೆ ತಿಳಿಸತಕ್ಕದ್ದು.   ಬೀಟ್ಸ್ ಆಫ್ ಕರ್ನಾಟಕ.. ಕರ್ನಾಟಕದ ಮುಂಚೂಣಿ ಯಲ್ಲಿರುವ ಮಾಸ ಪತ್ರಿಕೆ.

ಈ ದೀಪಾವಳಿಗೆ ...ಏನೆಲ್ಲಾ.. ತೆಗೆದುಕೊಳ್ಳಬಹುದು

ದೀಪಾವಳಿಗೂ ಮೊದಲು ಬರುವ “ಧನತ್ರಯೋದಶಿ” (ದಂತೇರಾಸ್) ಯಾವಾಗ ಗೊತ್ತಾ.? ಆ ದಿನ ಈ 9 ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಕೊಂಡರೂ ನಿಮಗೆಲ್ಲಾ ಶುಭವಾಗುತ್ತೆ.!
ದೀಪಾವಳಿ ಬರುತ್ತಿದೆ ಎಂದರೆ ಮೊದಲು ನೆನಪಾಗುವುದು ಪಟಾಕಿ. ಹಬ್ಬ ಒಂದು ವಾರ ಇದೆ ಎಂದಕೂಡಲೆ ಯಾರ ಮನೆಯಲ್ಲಾದರೂ ಈ ಸಂಭ್ರಮವೇ ಇರುತ್ತದೆ. ಇನ್ನು ಮಕ್ಕಳಿದ್ದರೆ ಅವರು ಪಟಾಕಿ ಕೊಡಿಸುವವರೆಗೂ ಬಿಡಲ್ಲ. ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಸಹ ದೀಪಾವಳಿ ಪಟಾಕಿ ಹೊಡೆಯುವುದೆಂದರೆ ಅದೇನೋ ಸಂಭ್ರಮ. ಆದರೆ ದೀಪಾವಳಿ ಎಂದರೆ ನಿಜವಾಗಿ ಪಟಾಕಿ ಅಷ್ಟೇ ಅಲ್ಲ. ದೀಪಾವಳಿಗೂ ಮೊದಲ ದಿನ ಬರುವ ಧನತ್ರಯೋದಶಿ ದಿನ ಎಲ್ಲರೂ ಲಕ್ಷ್ಮಿ ದೇವಿಗೆ ಪೂಜೆ ಮಾಡುತ್ತಾರೆ. ಈ ತಿಂಗಳು 15ರಂದು ಧಂತೇರಾಸ್ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಆ ದಿನ ಲಕ್ಷ್ಮಿದೇವಿ ಪೂಜೆ ಜತೆಗೆ ಹಲವು ವಸ್ತುಗಳನ್ನು ಸಹ ಕೊಳ್ಳಬೇಕಂತೆ. ಆ ರೀತಿ ಕೊಳ್ಳುವವರಿಗೆ ಇನ್ನೂ ಹೆಚ್ಚಿನ ಶುಭವಾಗುತ್ತವೆ. ಆ ದಿನ ಯಾವ ವಸ್ತುಗಳನ್ನು ಕೊಂಡರೆ ಒಳ್ಳೆಯದಾಗುತ್ತದೆ ಎಂಬುದನ್ನು ಈದ ತಿಳಿದುಕೊಳ್ಳೋಣ.
ಅಡುಗೆ ಪಾತ್ರೆಗಳು…
ಹಿತ್ತಾಳೆಯಿಂದ ತಯಾರಿಸಿದ ಅಡುಗೆ ಪಾತ್ರೆಗಳನ್ನು ಧಂತೇರಾಸ್ ದಿನ ಕೊಂಡು ಅವನ್ನು ಮನೆಯ ಪೂರ್ವ ದಿಕ್ಕಿನಲ್ಲಿಡಬೇಕು. ಇದರಿಂದ ಆ ಮನೆಯಲ್ಲಿ ಇರುವವರಿಗೆ ಅದೃಷ್ಟ ಕೂಡಿಬರುತ್ತದೆ.
ಪೊರಕೆ…
ಧಂತೇರಾಸ್ ದಿನ ಪೊರಕೆಯನ್ನು ಕೊಳ್ಳಬೇಕು. ಇದರಿಂದ ಆ ಮನೆಯಲ್ಲಿ ಇರುವವರಿಗೆ ಹಿಡಿದ ದರಿತ್ರ ತೊಲಗುತ್ತದೆ.
ಎಲಕ್ಟ್ರಾನಿಕ್ ವಸ್ತುಗಳು…
ಫ್ರಿಜ್, ಮೊಬೈಲ್ ಫೋನ್, ಟಿವಿಯಂತಹ ವಸ್ತುಗಳನ್ನು ಧಂತೇರಾಸ್ ದಿನ ಕೊಳ್ಳಬೇಕು. ಆ ಬಳಿಕ ಅವುಗಳನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಆ ರೀತಿ ಮಾಡಿದರೆ ಅಂದುಕೊಂಡ ಕೆಲಸಗಳು ನೆರವೇರುತ್ತವೆ.
ಅಕೌಂಟ್ಸ್ ಪುಸ್ತಕ…
ವ್ಯಾಪಾರ ಮಾಡುವವರು ಅಕೌಂಟ್ಸ್ ಪುಸ್ತಕವನ್ನು (ರಿಜಿಸ್ಟರ್) ಖರೀದಿಸಿ ಅದನ್ನು ಅವರ ಮಳಿಗೆಯಲ್ಲಿ ಅಥವಾ ಕಚೇರಿಯಲ್ಲಿ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದರಿಂದ ವ್ಯಾಪಾರ ವೃದ್ಧಿಸುತ್ತದೆ.
ಮಾಡುವ ಕೆಲಸಕ್ಕೆ ಸಂಬಂಧಿಸಿದವು…
ಯಾರು ಯಾವ ಉದ್ಯೋಗ ಮಾಡುತ್ತಿದ್ದರೂ, ವ್ಯಾಪಾರ ಮಾಡುತ್ತಿದ್ದರೂ ಅವಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ವಸ್ತುವನ್ನು ಧಂತೇರಾಸ್ ದಿನ ಕೊಂಡು ಲಕ್ಷ್ಮಿದೇವಿಗೆ ಪೂಜಿಸಬೇಕು. ಇದರಿಂದ ಅವರಿಗೆ ಆ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.
ಗೋಮತಿ ಚಕ್ರ…
ಗೋಮತಿ ಚಕ್ರ ಎಂಬ ಹೆಸರಿನ 11 ಕವಡೆಗಳನ್ನು ಖರೀದಿಸಿ ಅವುಗಳನ್ನು ಒಂದು ಅರಿಶಿಣ ಬಟ್ಟೆಯಲ್ಲಿ ಸುತ್ತಿ ನಿಮ್ಮ ಮನೆಯ ಲಾಕರ್‌ನಲ್ಲಿ ಇಡಬೇಕು. ಇದರಿಂದ ಸಂಪತ್ತು ಹರಿದುಬರುತ್ತದೆ.
ಲಕ್ಷ್ಮಿದೇವಿ, ವಿನಾಯಕ…
ಧಂತೇರಾಸ್ ದಿನ ಲಕ್ಷ್ಮಿದೇವಿ, ವಿನಾಯಕ ಜತೆಯಾಗಿರುವ ಫೋಟೋ ಅಥವಾ ಗೋಲ್ಡ್ ಕಾಯಿನ್ ಮನೆಗೆ ತಂದು ಅದಕ್ಕೆ ಪೂಜೆ ಮಾಡಬೇಕು. ಇದರಿಂದ ಆ ಮನೆಯಲ್ಲಿ ಎಲ್ಲ ಶುಭವಾಗುತ್ತದೆ. ಸಂಪತ್ತು ವೃದ್ಧಿಸುತ್ತದೆ.
ಸ್ವಸ್ತಿಕ್ ಚಿನ್ಹೆ…
ಸ್ವಸ್ತಿಕ್ ಚಿನ್ಹೆಯನ್ನು ಮನೆಯ ಮುಖ್ಯದ್ವಾರ ಅಥವಾ ಗೇಟ್ ಬಳಿ ನೇತು ಹಾಕಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವವರಿಗೆ ಅದೃಷ್ಟ ಕೂಡಿಬರುತ್ತದೆ.
ಚಿನ್ನ…
ಧನತ್ರಯೋದಶಿ ದಿನ ಸಾಧ್ಯವಾದಾರೆ ಬಂಗಾರ ಸಹ ಖರೀದಿಸಬಹುದು. ಅದಕ್ಕೆ ಇಷ್ಟೇ ಎಂಬ ಮಿತಿ ಇಲ್ಲ. ಎಷ್ಟು ಕಡಿಮೆ ಕೊಂಡರೂ ಆ ದಿನ ಬಂಗಾರ ಕೊಂಡರೆ ಒಳ್ಳೆಯದೇ ಆಗುತ್ತದೆ. ಬೆಳಗ್ಗೆ 6.34ರಿಂದ ಸಂಜೆ 6.20ರವರೆಗೆ ಕೊಳ್ಳಲು ಶುಭ ಮುಹೂರ್ತಗಳಿವೆಯಂತೆ.

ಶ್ರೀ ರಾಮನ. ವಂಶಸ್ಥರು... ಅವರ ಪಟ್ಟಿ

ಮಹಾಭಾರತದಲ್ಲಿ   ಕುರುವಂಶದ ದೊರೆ ಧೃತರಾಷ್ಟ್ರ ಮತ್ತು ಆತನ ರಾಣಿಯಾದ ಗಾಂಧಾರಿಗೆ ಜನಿಸಿದ ನೂರೊಂದು ಮಕ್ಕಳ ಹೆಸರು.
1.ದುರ್ಯೋಧನ
2.ಯುಯುತ್ಸು
3.ದುಶ್ಯಾಸನ
4.ದುಸ್ಸಹ
5.ದುಶ್ಯಲ
6.ಜಲಸಂಧ
7.ಸಮ
8.ಸಹ
9.ವಿಂದ
10.ಅನುವಿಂದ
11.ದುರ್ಧರ್ಷ
12.ಸುಬಾಹು
13.ದುಷ್ಟ್ರಧರ್ಷಣ
14.ದುರ್ಮರ್ಷಣ
15.ದುರ್ಮುಖ
16.ದುಷ್ಕರ್ಣ
17.ಕರ್ಣ
18.ವಿವಿಶಂತಿ
19.ವಿಕರ್ಣ
20.ಶಲ
21.ಸತ್ವ
22.ಸುಲೋಚನ
23.ಚಿತ್ರ
24.ಉಪಚಿತ್ರ
25.ಚಿತ್ರಾಕ್ಷ
26.ಚಾರುಚಿತ್ರ ಶರಾಸನ
27.ದುರ್ಮದ
28.ದುರ್ವಿಗಾಹ
29.ವಿವಿತ್ಸು
30.ವಿಕಟಾನನ
31.ಊರ್ಣನಾಭ
32.ಸುನಾಭ
33.ನಂದ
34.ಉಪನಂದ
35.ಚಿತ್ರಬಾಣ
36.ಚಿತ್ರವರ್ಮ
37.ಸುವರ್ಮ
38.ದುರ್ವಿರೋಚನ
39.ಅಯೋಬಾಹು
40.ಚಿತ್ರಾಂಗ
41.ಚಿತ್ರಕುಂಡಲ
42.ಭೀಮವೇಗ
43.ಭೀಮಬಲ
44.ಬಲಾಕಿ
45.ಬಲವರ್ಧನ
46.ಉಗ್ರಾಯುಧ
47.ಸುಷೇಣ
48.ಕುಂಡೋದರ
49.ಮಹೋದರ
50.ಚಿತ್ರಾಯುಧ
51.ನಿಷಂಗೀ
52.ಪಾಶೀ
53.ವೃಂದಾರಕ
54.ದೃಢವರ್ಮ
55.ದೃಢಕ್ಷತ್ರ
56.ಸೋಮಕೀರ್ತಿ
57.ಅನೂದರ
58.ದೃಢಸಂಧ
59.ಜರಾಸಂಧ
60.ಸತ್ಯಸಂಧ
61.ಸದಃಸುವಾಕ್
62.ಉಗ್ರಶ್ರವಸ
63.ಉಗ್ರಸೇನ
64.ಸೇನಾನೀ
65.ದುಷ್ಪರಾಜಯ
66.ಅಪರಾಜಿತ
67.ಪಂಡಿತಕ
68.ವಿಶಾಲಾಕ್ಷ
69.ದುರಾಧರ
70.ದೃಢಹಸ್ತ
71.ಸುಹಸ್ತ
72.ವಾತವೇಗ
73.ಸುವರ್ಚಸ
74.ಆದಿತ್ಯಕೇತು
75.ಬಹ್ವಾಶೀ
76.ನಾಗದತ್ತ
77.ಅಗ್ರಯಾಯೀ
78.ಕವಚೀ
79.ಕ್ರಥನ
80.ದಂಡೀ
81.ದಂಡಧಾರ
82.ಧನುರ್ಗ್ರಹ
83.ಉಗ್ರ
84.ಭೀಮರಥ
85.ವೀರಬಾಹು
86.ಅಲೋಲುಪ
87.ಅಭಯ
88.ರೌದ್ರಕರ್ಮಾ
89.ದ್ರುಢರಥಾಶ್ರಯ
90.ಅನಾಧೃಷ್ಯ
91.ಕುಂಡಭೇದೀ
92.ವಿರಾವೀ
93.ಪ್ರಮಥ
94.ಪ್ರಮಾಥೀ
95.ದೀರ್ಘರೋಮ
96.ದೀರ್ಘಬಾಹು
97.ವ್ಯೂಢೋರು
98.ಕನಕಧ್ವಜ
99.ಕುಂಡಾಶೀ
100.ವಿರಸಜ
101.ದುಶ್ಯಲಾ (ಮಗಳು)

*ಶ್ರೀ ರಾಮಚಂದ್ರನ ವಂಶವೃಕ್ಷ*

*ಬ್ರಹ್ಮನ ಮಗ ಮರೀಚಿ*

*ಮರೀಚಿಯ ಮಗ ಕಾಶ್ಯಪ*

*ಕಾಶ್ಯಪರ ಮಗ ಸೂರ್ಯ*

*ಸೂರ್ಯನ ಮಗ ಮನು*

*ಮನುವಿನ ಮಗ ಇಕ್ಷ್ವಾಕು*

*ಇಕ್ಷ್ವಾಕುವಿನ ಮಗ ಕುಕ್ಷಿ*

*ಕುಕ್ಷಿಯ ಮಗ ವಿಕುಕ್ಷಿ*

*ವಿಕುಕ್ಷಿಯ ಮಗ ಬಾಣ*

*ಬಾಣನ ಮಗ ಅನರಣ್ಯ*

*ಅನರಣ್ಯನ ಮಗ ಪೃಥು*

*ಪೃಥುವಿನ ಮಗ ತ್ರಿಶಂಕು*

*ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)*

*ದುಂಧುಮಾರುವಿನ ಮಗ ಮಾಂಧಾತ*

*ಮಾಂಧಾತುವಿನ ಮಗ ಸುಸಂಧಿ*

*ಸುಸಂಧಿಯ ಮಗ ಧೃವಸಂಧಿ*

*ಧೃವಸಂಧಿಯ ಮಗ ಭರತ*

*ಭರತನ ಮಗ ಅಶೀತಿ*

*అಶೀತಿಯ ಮಗ ಸಗರ*

*ಸಗರನ ಮಗ ಅಸಮಂಜಸ*

*ಅಸಮಂಜಸನ ಮಗ ಅಂಶುಮಂತ*

*ಅಂಶುಮಂತನ ಮಗ ದಿಲೀಪ*

*ದಿಲೀಪನ ಮಗ ಭಗೀರಥ*

*ಭಗೀರಥನ ಮಗ ಕಕುತ್ಸು*

*ಕಕುತ್ಸುವಿನ ಮಗ ರಘು*

*ರಘುವಿನ ಮಗ ಪ್ರವುರ್ಧ*

*ಪ್ರವುರ್ಧನ ಮಗ ಶಂಖನು*

*ಶಂಖನುವಿನ ಮಗ ಸುದರ್ಶನ*

*ಸುದರ್ಶನನ ಮಗ ಅಗ್ನಿವರ್ಣ*

*ಅಗ್ನಿವರ್ಣನ ಮಗ ಶೀಘ್ರವೇದ*

*ಶೀಘ್ರವೇದನ ಮಗ ಮರು*

*ಮರುವಿನ ಮಗ ಪ್ರಶಿಷ್ಯಕ*

*ಪ್ರಶಿಷ್ಯಕನ ಮಗ ಅಂಬರೀಶ*

*ಅಂಬರೀಶನ ಮಗ ನಹುಶ*

*ನಹುಶನ ಮಗ ಯಯಾತಿ*

*ಯಯಾತಿಯ ಮಗ ನಾಭಾಗ*

*ನಾಭಾಗನ ಮಗ ಅಜ*

*ಅಜನ ಮಗ ದಶರಥ*

*ದಶರಥನ ಮಗ ರಾಮ*

Monday 9 October 2017

National Symposium on National Supercomputing Mission (NSM

National Symposium on National Supercomputing Mission (NSM)
Over National Knowledge Network (NKN)
@ Chancery Pavilion Hotel, Residency Road , Bangalore.
Day 1 Updates

National Symposium on NSM over NKN is jointly organized by Centre for Development of Advanced Computing (C-DAC) & National Knowledge Network (NKN). The two days event was inaugurated on 9th October 2017, with a wholehearted participation from premier R&D organizations, Industry and Academic Institutes.

Dr. N. Sarat Chandra Babu, Executive Director, C-DAC Bangalore, delivered the welcome address. He highlighted NSM activities and mentioned the groups of NSM namely, R&D, Infrastructure, HRD and Application groups. Under infrastructure, 6 HPC installations will be coming under various places in the country by end of this financial year.  This mission will help the scientists and engineers spread over the country to be able to access HPC resources to carry out their research to solve National level problems.
Shri P. S. Dekhne, Scientific Consultant, Office of the Principal Scientific Adviser to Govt. of India, highlighted on the Big Data Analytics with high performance computing. As of now more than 1800 institutes are using the 10GB NKN connectivity, he appealed the participants to provide feedback for the same.

Shri B. Vinaya, State Informatics Officer & Senior Technical Director, NIC Bangalore talked about multi gigabit network connecting all states capital through NKN. He also highlighted the projects from NIC like E-office, E-hospitals, DBT(Direct Benefit Transfer), BhagyaLakshmi, Nadakacheri, Jeevan praman for pensioners and Samrakshane (Crop insurance).

The keynote address was by Shri B.S. Jagadeesh, Outstanding Scientist & Associate Director, E&I Group in Bhabha Atomic Research Centre, Trombay, Mumbai, on Building and Operating State of the art Peta-scale computing systems. He talked about the structure of the petascale system bandwidth, latency, scalability of the infiniband network and storage technology. He elaborated on the methods to extract maximum from a single processor.

The inaugural program also included release of Cloud Vulnerability scanner, a product by C-DAC Bangalore team. Cloud Vulnerability scanner can be used to audit cloud computing infrastructure for identifying security threats and find out ways to mitigate them.

Shri G.L. Gangaprasad, Senior Director, C-DAC Bangalore proposed the vote of thanks.

Three technical sessions were scheduled on day 1.

Session 1 was chaired by Shri Gangaprasad. The first talk by Shri P.S. Dekhne explained about Big Data Sciences for Scientific and Engineering Applications of HPC Domain and their initiatives in projects such as Large Hadron Collider(LHC), Genomics, Astrophysics and Climate sciences.  Dr. Rajendra Joshi talked about Accelerating biology: extreme scale visualization and analysis where he highlighted various collaborative projects on disease studies using genomics, molecular dynamics and Data analytics. Prof.Prabhu Ramachandran, IIT Bombay, gave an overview of Making HPC for numerical methods productive and fun and explained about python based interfaces which they developed for code portability and output reproducibility.

Session 2 was chaired by Dr. Sumit Mookherjee IUAC, Delhi. Shri Bharat Kumar, NVIDIA explained about the Practical reality of Heterogeneous supercomputing and requested user community to give their feedback to incorporate the same in GPU architecture. Shri Ramakishan Malladi, Intel delivered a talk on Importance of software optimization and code modernization to unleash potential of silicon. Dr. Gurunath Gurrala, IISc, highlighted Role of HPC for Power Systems Operation and the approaches to identify blackouts in power grids.

Session 3 was chaired by Dr A.B Saha, former Executive Director, C-DAC Kolkata. Dr MV Hosur, presented Applications of Bigdata technology in Bioscience area. Prof Veni Madavan, IISc, presented, Blockchain Technology:Applications beyond Cryptocurrencies. Dr. Prem Laxman Das, SETS Chennai, Cray delivered a talk on Post-quantum Cryptography.

The event had a participation of around 200 researchers, scientists and academicians from Bhopal, Ahmedabad, Gangtok, Varanasi, Pune, Imphal, Waynad, Pandharpur, Chennai, Tirupati, Bhopal, Mumbai, Delhi, Salem, Suratkal, Warangal, Trivandrum, Guwahati, Surat, Mysore, Guntur, Kolkata, Gandhinagar, Nagpur, Chandhigarh, Durgapur, Coimbatore, Bangalore etc. Day-1 of National Symposium on NSM over NKN concluded successfully with interesting technical demos and closed networking with experts and participants.

Saturday 7 October 2017

Global retail giant Toys“R”Us® debuts in India

Global retail giant Toys“R”Us® debuts in India


with the first store in Bengaluru


Tablez India, franchise partner for Toys“R”Us® in India, to open 65 stores by 2025.


 

Bangalore October 7, 2017: Tablez India, a division of Abu Dhabi-based LuLu Group International has, in an exclusive master franchise agreement with US company, Toys Pvt. Ltd., launched the global retail brand Toys“R”Us® in the Indian market in Bangalore, today. Toys“R”Us® operates more than 850 eponymous and Babies “R” Us stores in North America and its products are sold at 1,000 inter-stores in 37 countries.

The first Toys“R”Us® store has opened at Phoenix Market City, Bangalore and was inaugurated by five young achievers from Karnataka along with Adeeb Ahamed, Managing Director, Tablez andShafeena Yusuff Ali, Chairperson, Tablez India.

In India, the brand has launched the store in two formats Toys“R”Us® which is the world's leading toy store and Babies “R”Us, a one-stop destination for baby essentials. The store is designed to be an experiential store and is spread over 20,000 sq ft.

As the world’s greatest toy store, Toys“R”Us®  offers a full range of toys for both boys and girls in the age group 3 to 11 years and will have a dedicated section for each category of toys. The store will sell everything from action figure to dolls, books, role play kits, remote-controlled cars, blasters, plush, wheel goods, bikes, ride-on etc.

The store will stock a large variety of soft toys ranging from a teddy bear to bunny to a talking lamb. Children can also get a wide range of sports toys like basketball equipment, boxing equipment and gear, youth football equipment and so on. Apart from play and sports toys, kids can find educational toys, art and craft, books, games and puzzles in their learning category section.

Babies “R”Us is the quintessential stop for new and expectant moms and young parents and offers a full range of products like diapers, food, wipes and almost everything a parent needs to nurture infants. The store will also stock baby goods like bedding, travel and safety, baby gear, infant care and also has curated apparel for babies.  

On the occasion of the launch of the store, Adeeb Ahamed, Managing Director, Tablez India, said “We are delighted at setting up the first Toys“R”Us® store in Bengaluru.  India is among the fastest growing market for toys retail and is growing at a rate of 15 to 20% percent annually. We are planning to expand our stores in other parts of the country. We are aiming to have our second store in Delhi by November this year and by end of this financial year we will have two more stores in Chennai and Mumbai.”

 

About Tablez India

 

Tablez India, part of LuLu Group International, has introduced leading global brands in F&B, toys, lifestyle and apparel to India. It has signed a master franchise agreement with Spanish company, Grupo Cortefiel, to introduce two of its brands, Springfield - a youth-oriented casual fashion brand, and women’secret, an innerwear, swimwear, homewear and sleepwear brand in the country. Tablez India has also signed a master-franchise agreement with US brand Toys“R”Us® to introduce the popular Toys“R”Us® and Babies “R” Us branded outlets. Tablez India holds the franchise rights for Cold Stone Creamery; South Africa-based flame-grilled chicken concept, Galito’s. In addition to holding the franchise rights for US-based Cold Stone Creamery and South Africa-based flame-grilled chicken concept Galito’s, Tablez has successfully developed two home-grown brands: Bloomsbury’s – a boutique café and artisan bakery, and Peppermill - a colonial Indian themed fine dining restaurant.  Tablez currently operates more than 35 outlets globally and plans to expand to 250 outlets by 2020. For more information, pls visit: http://www.tablez.in/about-us/  

About Toys“R”Us® & Babies “R”Us:

With more than 65 years in the toy business Toys“R”Us® Inc. is the world’s leading dedicated toy and baby products retailer, offering a differentiated shopping experience through its family of brands. Merchandise is sold in 885 stores in the United States, Puerto Rico and Guam and in more than 810 international stores in addition to over 255 licenced stores in 37 countries. Toys“R”Us® is known as the toy authority for generations of parents and children alike. Founded by Charles Lazarus, Toys“R”Us® revolutionized the principle of quality, value and selection and realized that success in the toy business meant focusing on the everyday shopper. With a strong portfolio of e commerce sites, the company provides shoppers with a broad online selection of distinctive toys and baby products. The company is headquartered in Wayne, New Jersey. Toys“R”Us® embodies ideals that are focused on a memorable shopping experience for customers through classic, in-demand and exclusive merchandise, unique feature shops and knowledgeable trained sales staff. Featuring its iconic mascot Geoffrey the Giraffe – who was introduced in February 1960, along with the catchy jingle, “I Don’t Want to Grow Up, I’m A Toys“R”Us® Kid” – Toys“R”Us® is one of the most recognized and beloved brands in the world.

Friday 6 October 2017

HIGHLIGHTS OF 22ND GST COUNCIL MEETING

*

1. Composition Scheme Limit enhanced to Rs. 1.00 Cr with 1% Tax for Traders, 2% for Manufacturrs & 5% for Restaurent.

2. Filing of Returns upto Turnover of Rs. 1.50 Cr - Quarterly (Non Composition Assessee)

3. Refund to Exporters - To be Started from 10.10.2017 for July Month & 18.10.2017 for August Month manually.

4. From now Onwards Refund will be granted immediately after filing the Return to the Exporters.

5. Postponment of RCM till Dt. 31.03.2018.

6. E way Bill implementation postponed till April 2018.

7. PAN not needed for Jewellery below Rs. 2.00 Lacs.

8. 5 Member Committee to be Constituted for review of Rate of GST for Restaurant & Inter State Sales Transaction for Composition Assessee and Exclusion of Exempted Goods from Total Turnover and ITC to Manufacturers opting Composition Scheme.

9. E-Wallet Facility to Exporters from April 2018

10. Advance Licence Holder, 100% EOU, & EPCG Holder can export @ 0.1% till 31.03.2018

11. Exemption from Inter State Service from RCM if Service Provider is having below 20.00 Lacs Turnover.

12. TDS / TCS postponed till April 2018

13. Rate of GST changed for 32 Items.

14. Man Made Yarn to be Taxed at 12% instead of 18%

15. Services Job Work of Jari from 12% to 5%

16. Printing Jobwork - 5%

17. Govt. Contracts involving High Element of Labour @5%

18. Leasing of Vehicle abatement of 65% which are contracted before 01.07.2017.

ಕರ್ನಾಟಕ ರಾಜ್ಯದ ಗ್ರಾಮಲೆಕ್ಕಾಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳು

ಹಲವುಬಾರಿ ಮನವಿ ಮಾಡಿದರೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಕಾರಣ ದಿನಾಂಕ ೧೧.೧೦.೨೦೧೭ ರಂದು ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದೇವೆ.

ಕರ್ನಾಟಕ ರಾಜ್ಯದ ಗ್ರಾಮಲೆಕ್ಕಾಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸೇವಾ ನಿಯಮದಿಂದ ಅನ್ಯಾಯಗಳನ್ನು ಮತ್ತು ಕ್ಷೇತ್ರ ಕಾರ್ಯಗಳಲ್ಲಾಗುವ ತೊಂದರೆಗಳು ಮತ್ತು ತಂತ್ರಾಂಶಗಳಿಂದ ಹೇರುತ್ತಿರುವ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ನಿವಾರಿಸುವಂತೆ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮತ್ತು ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ಇವರಿಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದೇವೆ.
ಆದರೂ ಸಹ ಇದುವರೆಗೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದೇ ಬಹಳ ನಿರೀಕ್ಷೆಗಳ ಆಶಾ ಗೋಪುರ ಹೊಂದಿದ್ದ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳಿಗೆ ತೀವ್ರ ನಿರಾಸೆ ಉಂಟಾಗಿದ್ದು, ಇದರೊಂದಿಗೆ ಗಾಯದ ಮೇಲೆ ಬರೆ ಎಳೆದಂತೆ ಅನ್ಯ ಇಲಾಖೆಯ ಅಧಿಕಾರಿಗಳು ಅವರ ಇಲಾಖೆಯ ತಾಂತ್ರಿಕ ಕೆಲಸ ಕಾರ್ಯಗಳನ್ನು ವಿವಿಧ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ ತಾಂತ್ರಿಕೇತರ ಕಾರ್ಯನಿರ್ವಾಹಕ ಸಿಬ್ಬಂದಿಗಳಾದ ಗ್ರಾಮಲೆಕ್ಕಾಧಿಕಾರಿಗಳ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ವಿಡಿಯೋ ಕಾನ್ಫರೆನ್ಸ್ಗಳನ್ನು ನಡೆಸಿ ತಾಂತ್ರಿಕ ಕೆಲಸಗಳನ್ನು ನಿರ್ವಹಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಮಾನಸಿಕವಾಗಿ ಒತ್ತಡ ಹೇರುತ್ತಾರೆ.
ದಿನಾಂಕ : 11.10.2017 ರಂದು ಅನಿರ್ದಿಷ್ಠ ಅವದಿಕಾಲ ನಗರದ ಪ್ರಿಡಂ ಪಾರ್ಕ್ ನಲ್ಲಿ ಸಮಸ್ತ ರಾಜ್ಯದ ಗ್ರಾಮಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕರೊಂದಿಗೆ ಹಮ್ಮಿಕೊಂಡಿದ್ದೇವೆ.
ಇದರ ಬಗ್ಗೆ ಸಂಪೂರ್ಣ ವಿವರವನ್ನು ಇಂದಿನ ಘೋಷ್ಠಿಯಲ್ಲಿ ತಿಳಿಸಲಾಗಿದೆ ಮತ್ತು ಇದರೊಂದಿಗೆ ಪತ್ರಿಕಾ ಘೋಷ್ಠಿಯ ವಿವರವನ್ನು ಲಗತ್ತಿಸಲಾಗಿದೆ.

ದಯವಿಟ್ಟು ತಮ್ಮ ಘನ ಮಾಧ್ಯಮದಲ್ಲಿ ಪ್ರಕಟಿಸಿ, ಗ್ರಾಮಲೆಕ್ಕಾಧಿಕಾರಿಗಳ ವಿವಿಧ ಬೇಡಿಕೆಗಳಿಗೆ ತಮ್ಮ ಮೂಲಕ ಸರ್ಕಾರದಗಮನ ಸೆಳೆಯಬೇಕೆಂದು ಈ ಮೂಲಕ ಕೋರುತ್ತೇವೆ. 

ಹಿರಿಯರು ಎಂದಾಕ್ಷಣ... ಪಾಲುಸಬೇಕಾದ ನಿಯಮಗಳು

ನಮ್ಮ ಹಿರಿಯರನ್ನು ಗೌರವಿಸಲು ಕನಿಷ್ಟ ಈ ಕೆಳಗಿನ ೩೫ ನಿಯಮ ಪಾಲಿಸಬೇಕು:-
1. ಅವರ ಮುಂದೆ ಕುಳಿತಾಗ ಫೋನ್ ಗಳನ್ನು ದೂರವಿಡಿ
2. ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ ಮಧ್ಯದಲ್ಲೇ ನಿಲ್ಲಿಸಬೇಡಿ.
3. ಅವರ ಅಭಿಪ್ರಾಯ ಒಪ್ಪಿಕೊಳ್ಳಿ
4. ಅವರ ಜೊತೆ ಮಾತಾಡುವಾಗ ಚಿತ್ತವಿಡಿ
5. ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ
6. ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ
7. ದುಖ:ದ ವಿಷಯ ಆದಷ್ಟು ಅವೈಡ್ ಮಾಡಿ
8. ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಮಾತ್ರ ಮಾತಾಡಿ
9. ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ
10. ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ
11. ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಮರೆಯುವಂತೆ ಮಾಡಿ
12. ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ
13. ಅವರ ಮುಂದೆ ಗೌರವವಾಗಿ ಕುಳಿತುಕೊಳ್ಳಿ
14. ಅವರ ಮಾತನ್ನು ತೆಗಳಬೇಡಿ.
15. ಅವರು ಮಾತನಾಡುವಾಗ ಅರ್ಧಕ್ಕೆ ನಿಲ್ಲಿಸಬೇಡಿ.
16. ಅವರ ವಯಸ್ಸಿಗೆ ಬೆಲೆಕೊಡಿ.
17. ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ
18. ಅವರ ಮುಂದೆ ಮೊಮ್ಮಕ್ಕಳನ್ನು ಹೊಡೆಯಬೇಡಿ
19. ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ.
20. ಅವರ ಮುಂದೆ ಜೋರಾಗಿ ಮಾತನಾಡಬೇಡಿ
21. ಅವರ ಮುಂದೆ ಕಾಲು ತೋರಿಸುವ ಹಾಗೆ ಕುಳಿತುಕೊಳ್ಳಬೇಡಿ
22. ಅವರಕಡೆ ಬೆನ್ನುಮಾಡಿ ಕುಳಿತುಕೊಳ್ಳಬೇಡಿ
23. ಅವರ ನ್ಯೂನ್ಯತೆಯನ್ನು ಪದೇ ಪದೇ ಎತ್ತಿ ತೋರಿಸಬೇಡಿ.
24. ಸಣ್ಣ ಸಣ್ಣ ಬಳಲಿಕೆಯನ್ನು ಅವರ ಮುಂದೆ ಹೇಳಬೇಡಿ.
25. ಅವರು ಮಾಡಿದ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ
26. ನಿಮ್ಮ ಕಷ್ಟಗಳನ್ನು ಆದಷ್ಟು ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ.
27. ಅವರ ವಯಸ್ಸಿನ ಬಗ್ಗೆ ಹೀಯಾಳಿಸಬೇಡಿ
28. ಅವರು ಮಾಡಿದ ತಪ್ಪಿಗೆ ನಗಬೇಡಿ, ನೋಡಿಯೂ ನೋಡದಹಾಗೆ ಇರಿ.
29. ಹೋಗುವಾಗ ಬರುವಾಗ ಭೆಟ್ಟಿಯಾಗಿ ಆಶೀರ್ವಾದ ಪಡೆಯಿರಿ
30. ಅವರಿಗೆ ಇಷ್ಟವಾದ ಹೆಸರಿನಿಂದಲೇ ಕರೆಯಿರಿ
31. ಅವರ ಅನುಭವವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ
32. ದಿನಕ್ಕೆ ಕನಿಷ್ಟ 1ಗಂಟೆಯಾದರೂ ಮಕ್ಕಳನ್ನು ಅವರ ಹತ್ತಿರ ಬಿಡಿ
33. ಅವರನ್ನು ಒಂಟಿಯಾಗಿ ಬಿಡಬೇಡಿ, ನಿಮ್ಮ ಜೊತೆ ಇರಿಸಿಕೊಳ್ಳಿ
34. ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ, ಪ್ರಶ್ನೆಗೆ ಮರುಪ್ರಶ್ನೆ ಮಾಡಬೇಡಿ
35. ನಿಮ್ಮ ಕರ್ತವ್ಯ ಮರೆಯಬೇಡಿ, ಬೇರೆಯವರ ಕರ್ತವ್ಯಲೋಪದ ಬಗ್ಗೆ ಯೋಚಿಸಬೇಡಿ.
# ಹಿರಿಯರು ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ, ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ, ಆದಷ್ಟು ಹಿರಿಯರನ್ನು ಕಾಯ್ದುಕೊಳ್ಳಿ, ಅವರಿಗೆ ಗೌರವದಿಂದ ಕಾಣಿ.

ನಮ್ಮ ಕರ್ನಾಟಕದ..... ಶ್ರೀಮಂತರು

ಫೋರ್ಬ್ಸ್ ಇಂಡಿಯಾ-2017 ಟಾಪ್ 100 ಶ್ರೀಮಂತರ ಪಟ್ಟಿಯನ್ನು ಗುರುವಾರ ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದೆ. ಸತತ 10ನೇ ವರ್ಷವೂ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರು 2.5 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.


ಕಳೆದ ಸಲದಂತೆಯೂ ಈ ಸಲ ಕೂಡ 7 ಕನ್ನಡಿಗರು ದೇಶದ ಟಾಪ್ 100 ಶ್ರೀಮಂತರಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಈ ಸಲ ಬೆಂಗಳೂರಿನ ವಿಪ್ರೋ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿ 1.25 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ದೇಶದ ‘ಶ್ರೀಮಂತ ನಂ.2’ ಎನ್ನಿಸಿಕೊಂಡಿದ್ದಾರೆ. ಕಳೆದ ಸಲಕ್ಕಿಂತ ಅವರು ಈ ಬಾರಿ 2 ಸ್ಥಾನ ಮೇಲೇರಿದ್ದಾರೆ.


ಪಟ್ಟಿಯಲ್ಲಿ ಸ್ಥಾನ ಪಡೆದ ಇನ್ನಿತರರ ಕನ್ನಡಿಗರೆಂದರೆ ಬಿ.ಆರ್. ಶೆಟ್ಟಿ, ಕಿರಣ್ ಮಜುಂದಾರ್ ಶಾ, ರಂಜನ್ ಪೈ, ಎನ್.ಆರ್. ನಾರಾಯಣಮೂರ್ತಿ, ನಂದನ್ ನಿಲೇಕಣಿ ಹಾಗೂ ಎಸ್. (ಕ್ರಿಸ್) ಗೋಪಾಲಕೃಷ್ಣನ್.


ಏರಿಳಿತ:


2016ರಲ್ಲಿ 4ನೇ ಸ್ಥಾನದಲ್ಲಿದ್ದ ಅಜೀಂ ಪ್ರೇಮ್‌'ಜಿ, ಸುಮಾರು 98 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಈ ಸಲ ಅವರ ಸಂಪತ್ತು 1.25 ಲಕ್ಷ ಕೋಟಿ ರು.ಗೆ ನೆಗೆದಿದ್ದು, ದ್ವಿತೀಯ ಸ್ಥಾನಕ್ಕೇರಿದ್ದಾರೆ. ಹೋದ ಬಾರಿ 47ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಮೂಲದ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ಈ ಸಲ 34ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರ ಆಸ್ತಿ ಮೌಲ್ಯ 16 ಸಾವಿರ ಕೋಟಿ ರು.ನಿಂದ 26 ಸಾವಿರ ಕೋಟಿ ರು.ಗೆ ಏರಿದೆ.


ಬಯೋಕಾನ್‌'ನ ಕಿರಣ್ ಮಜುಂದಾರ್ ಶಾ ಅವರು 2016ರಲ್ಲಿ 65ನೇ ಸ್ಥಾನದಲ್ಲಿದ್ದರು ಹಾಗೂ 12 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಆದರೆ ಈ ಬಾರಿ ಅವರ ಆಸ್ತಿ 15 ಸಾವಿರ ಕೋಟಿ ರು.ಗೆ ಏರಿದ್ದರೂ 8 ಸ್ಥಾನದಷ್ಟು, ಅಂದರೆ 72ನೇ ಸ್ಥಾನಕ್ಕೆ ಕುಸಿದಿದ್ದಾರೆ.


ಮಣಿಪಾಲ್ ಸಮೂಹದ ರಂಜನ್ ಪೈ ಅವರು 12.5 ಸಾವಿರ ಕೋಟಿ ರು. ಆಸ್ತಿಯೊಂದಿಗೆ ಈ ಬಾರಿ 80ನೇ ಸ್ಥಾನ ಅಲಂಕರಿಸಿದ್ದಾರೆ. ಕಳೆದ ಬಾರಿ ಅವರು 11 ಸಾವಿರ ಕೋಟಿ ರು. ಆಸ್ತಿಯೊಂದಿಗೆ 74ನೇ ಸ್ಥಾನ ಪಡೆದಿದ್ದರು.


ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಕಳೆದ ಬಾರಿ 62ನೇ ಸ್ಥಾನದಲ್ಲಿದ್ದರು ಹಾಗೂ 12 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಈ ಸಲ ಅವರು ಹೆಚ್ಚೂ ಕಮ್ಮಿ ಇಷ್ಟೇ ಆಸ್ತಿ ಉಳಿಸಿಕೊಂಡಿದ್ದರೂ 84ನೇ ಸ್ಥಾನಕ್ಕೆ ಇಳಿದಿದ್ದಾರೆ. ಇನ್ಫೋಸಿಸ್‌'ನ ನಂದನ್ ನಿಲೇಕಣಿ ಅವರು ಕಳೆದ ಬಾರಿ 80ನೇ ಸ್ಥಾನದಲ್ಲಿದ್ದರು ಹಾಗೂ ಸುಮಾರು 10 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಈ ಸಲ ಅವರು 89ನೇ ಸ್ಥಾನಕ್ಕೆ ಕುಸಿದಿದ್ದರೂ ಆಸ್ತಿ ಮೌಲ್ಯವನ್ನು 11 ಸಾವಿರ ಕೋಟಿ ರು.ಗೆ ಹೆಚ್ಚಿಸಿಕೊಂಡಿದ್ದಾರೆ.


ಕಳೆದ ಸಲ 81ನೇ ಸ್ಥಾನ ಪಡೆದಿದ್ದ ಇನ್ಫೋಸಿಸ್‌'ನ ಎಸ್. ಗೋಪಾಲಕೃಷ್ಣನ್ ಅವರು ಕಳೆದ ಸಲದಂತೆ ಈ ಸಲ 10 ಸಾವಿರ ಕೋಟಿ ರು. ಆಸ್ತಿಯನ್ನೇ ಉಳಿಸಿಕೊಂಡಿದ್ದರೂ, 92ನೇ ಸ್ಥಾನಕ್ಕೆ ಕುಸಿದಿದ್ದಾರೆ.